More

    ಶ್ರೇಯಸ್ ತಲ್ಪಾಡೆ ಮದುವೆಯಾದರೂ ಮುಚ್ಚಿಟ್ಟಿದ್ದು ಏಕೆ?

    ಮುಂಬೈ: ಬಾಲಿವುಡ್​ ನಟ ಶ್ರೇಯಸ್​ ತಲ್ಪಾಡೆ ಕೆಲವು ವರ್ಷಗಳ ಹಿಂದೆ ದೀಪ್ತಿ ಎಂಬುವವರನ್ನು ಮದುವೆಯಾದರು. ಆದರೆ, ಮದುವೆಯಾಗಿ ಹಲವು ದಿನಗಳ ಕಾಲ ಅವರು ಈ ವಿಷಯವನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದರು. ಅವರ ಮದುವೆಯ ವಿಷಯವಾಗಿ ಗುಸುಗುಸುಗಳು ಕೇಳಿಬರುತ್ತಿದ್ದರೂ, ಶ್ರೇಯಸ್​ ಮಾತ್ರ ಮದುವೆ ವಿಷಯವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಕೊನೆಗೊಂದು ದಿನ ಅಧಿಕೃತವಾಗಿ ದೀಪ್ತಿ ಕೈಹಡಿದಿದ್ದಾಗಿ ಹೇಳಿಕೊಂಡು, ಎಲ್ಲರ ಬಾಯಿ ಮುಚ್ಚಿಸಿದ್ದರು.

    ಇದನ್ನೂ ಓದಿ: ಚಿತ್ರರಂಗದವರಿಗೆ ಲಸಿಕೆ ವಿತರಿಸಲು ಫಿಲ್ಮ್ ಚೇಂಬರ್ ಮನವಿ

    ಇಷ್ಟಕ್ಕೂ ಶ್ರೇಯಸ್​ ತಮ್ಮ ಮದುವೆ ವಿಷಯವನ್ನು ಮುಚ್ಚಿಟ್ಟಿದ್ದು ಏಕೆ? ಎಂಬ ಪ್ರಶ್ನೆ ಸಹಜ. ಈಗ ಆ ವಿಷಯವನ್ನು ಬಹಿರಂಗಪಡಿಸಿರುವ ಶ್ರೇಯಸ್​, ಒಂದು ಪಕ್ಷ ಮದುವೆಯಾದ ವಿಷಯ ಹೇಳಿದ್ದರೆ, ಇಕ್ಬಾಲ್​ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

    ಶ್ರೇಯಸ್​ಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಚಿತ್ರವೆಂದರೆ ಅದು ಇಕ್ಬಾಲ್​. ಈ ಚಿತ್ರದಲ್ಲಿ ಅವರೊಬ್ಬ ಗ್ರಾಮೀಣ ಭಾಗದ ಕ್ರಿಕೆಟರ್​ ಆಗಿ ಕಾಣಿಸಿಕೊಂಡಿದ್ದರು. ಗಿರೀಶ್​ ಕಾರ್ನಾಡ್​, ನಾಸೀರುದ್ದೀನ್​ ಷಾ ಮುಂತಾದವರು ಅಭಿನಯಿಸಿದ್ದ ಈ ಚಿತ್ರವನ್ನು ನಾಗೇಶ್​ ಕುಕನೂರ್​ ನಿರ್ದೇಶಿಸಿದ್ದರು.

    ಈ ಚಿತ್ರದ ಶೂಟಿಂಗ್​ ಶುರುವಾದ ಸಂದರ್ಭದಲ್ಲಿ ಶ್ರೇಯಸ್​, ತಮ್ಮ ಮದುವೆಗೆ ಮೂರು ದಿನ ರಜೆ ಬೇಕು ಎಂದು ನಿರ್ದೇಶಕರನ್ನು ಕೇಳಿದರಂತೆ. ಇದನ್ನು ಕೇಳಿ ನಾಗೇಶ್​ ಸಿಟ್ಟಾದರಂತೆ. ಮದುವೆ ಕ್ಯಾನ್ಸಲ್​ ಮಾಡು ಎಂದು ಹಠ ಹಿಡಿದರಂತೆ. ಕಾರಣ, ಚಿತ್ರದಲ್ಲಿ ನಾಯಕ ಇನ್ನೂ ಯುವಕ. ಕ್ರಿಕೆಟಿಗನಾಗಬೇಕೆಂಬ ಮಹತ್ವಾಕಾಂಕ್ಷೆ ಇರುವವನು. ಅಂಥವನು ನಿಜಜೀವನದಲ್ಲಿ ಆಗಲೇ ಮದುವೆಯಾಗಿದ್ದಾನೆ ಎಂದು ಪ್ರೇಕ್ಷಕರಿಗೆ ಗೊತ್ತಾದರೆ, ಚಿತ್ರ ನೋಡುತ್ತಾರೋ ಇಲ್ಲವೋ ಎಂದು ಅವರು ಮದುವೆ ಕ್ಯಾನ್ಸಲ್​ ಮಾಡುವುದಕ್ಕೆ ಹೇಳಿದ್ದರಂತೆ.

    ಇದನ್ನೂ ಓದಿ: ಸ್ಟ್ರೇಟ್ ಫಾರ್ವರ್ಡ್ ಪ್ರಿಯಾಂಕಾ; ಬಿಗ್ ಬಾಸ್​ನ ಕಿರುಪಯಣ ನೆನೆದ ಪಟಾಕಿ ಸುಂದರಿ

    ಒಂದು ಕಡೆ ಒಳ್ಳೆಯ ಚಿತ್ರ, ಇನ್ನೊಂದು ಕಡೆ ಮದುವೆ … ಇವೆರೆಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಬಿದ್ದ ಶ್ರೇಯಸ್​, ಕೊನೆಗೆ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗುವವರೆಗೂ ಮದುವೆಯಾಗಿರುವ ವಿಷಯವನ್ನು ಎಲ್ಲೂ ಬಹಿರಂಗಪಡಿಸುವುದಿಲ್ಲ ಎಂದು ಪ್ರಮಾಣ ಮಾಡಿದರಂತೆ. ಆ ನಂತರವಷ್ಟೇ ನಾಗೇಶ್​ ಕುಕನೂರ್​, ಶ್ರೇಯಸ್​ಗೆ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದ್ದು. ಈ ಚಿತ್ರ ಹಿಟ್​ ಆಗಿದ್ದಷ್ಟೇ ಅಲ್ಲ, ಶ್ರೇಯಸ್​ ಚಿತ್ರಬದುಕಿಗೆ ದೊಡ್ಡ ಬ್ರೇಕ್​ ಸಹ ನೀಡಿದ್ದು ವಿಶೇಷ.

    ಡಾನ್​ನಿಂದ ತಪ್ಪಿಸಿಕೊಳ್ಳಲು ಮದುವೆಯಾದರಂತೆ ರಾಖಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts