More

    ಕೆಜಿಎಫ್​ ನಿರ್ದೇಶಕರೇ ‘ಹುಟ್ಟು’ ಹಾಕಿದರು; ರವಿ ಬಸ್ರೂರ್​ಗಿಂದು ಒಂದಲ್ಲ ಎರಡು ಹುಟ್ಟುಹಬ್ಬ!

    ಬೆಂಗಳೂರು: ‘ಕೆಜಿಎಫ್-2’ ಚಿತ್ರದ​ ಸಂಗೀತ ನಿರ್ದೇಶಕ ರವಿ ಬಸ್ರೂರ್​ಗೆ ಇವತ್ತು ಬರೀ ಹೊಸ ಹರ್ಷವಲ್ಲ, ಹೊಸ ಹರ್ಷ ಕೂಡ. ಏಕೆಂದರೆ ‘ಕೆಜಿಎಫ್-2’​ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಇಂದು ಬಸ್ರೂರಲ್ಲೇ ರವಿಯೊಂದಿಗೇ ಇದ್ದಾರೆ. ಇಬ್ಬರೂ ಬಸ್ರೂರಲ್ಲಿ ಜೊತೆಯಾಗಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಒಂದೇ ಉತ್ತರ ‘ಹುಟ್ಟು’. ಹೌದು.. ಇಂದು ರವಿ ಬಸ್ರೂರ್​ಗೆ ಒಂದಲ್ಲ ಎರಡು ಹುಟ್ಟುಹಬ್ಬ.

    ರವಿ ಬಸ್ರೂರು ಇಂದು ಎರಡೆರಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ, ಅವೆರಡರಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಪಾಲ್ಗೊಂಡು ಸಂಭ್ರಮ ಹಂಚಿಕೊಂಡಿದ್ದಷ್ಟೇ ಅಲ್ಲ, ತಾವೂ ಒಂದು ‘ಹುಟ್ಟು’ ಹಾಕಿದ್ದಾರೆ. ಕರಾವಳಿ ಎಂದಮೇಲೆ ನೀರು, ನದಿ, ದೋಣಿ ಸಹಜವೇ. ದೋಣಿ ಮುಂದಕ್ಕೆ ಹೋಗಲು ‘ಹುಟ್ಟು’ ಹಾಕಲೇಬೇಕು. ಕರಾವಳಿ ತೀರದ ರವಿ ಬಸ್ರೂರು ಅವರ ಅಂಥದ್ದೊಂದು ಕನಸಿನ ನಾವೆಗೆ ಇಂದು ಪ್ರಶಾಂತ್ ನೀಲ್ ‘ಹುಟ್ಟು’ ಹಾಕಿದ್ದಾರೆ. ಅರ್ಥಾತ್, ರವಿ ತಮ್ಮ ಊರಾದ ಕುಂದಾಪುರದ ಬಸ್ರೂರಿನಲ್ಲಿ ಆರಂಭಿಸಿರುವ ಹೊಸ ಸ್ಟುಡಿಯೋ ‘ರವಿ ಬಸ್ರೂರ್ ಮ್ಯೂಸಿಕ್ ಆ್ಯಂಡ್ ಮೂವೀಸ್​’ ಸಂಸ್ಥೆಯನ್ನು ಪ್ರಶಾಂತ್ ನೀಲ್​ ಉದ್ಘಾಟಿಸಿದ್ದಾರೆ.

    ಈ ಬಗ್ಗೆ ತಮ್ಮ ಸಂಭ್ರಮವನ್ನು ಹಂಚಿಕೊಂಡಿರುವ ರವಿ ಬಸ್ರೂರ್, ‘ಇದು ನನ್ನ ಜೀವನದಲ್ಲೇ ಅತ್ಯುತ್ತಮ ದಿನ. ನನ್ನ ಹುಟ್ಟೂರು ಬಸ್ರೂರಿನಲ್ಲಿ ಒಂದು ಸ್ಟುಡಿಯೋ ನಿರ್ಮಿಸಬೇಕು ಎಂಬ ನನ್ನ ಹಠ ಇಂದು ಸಾಕಾರಗೊಂಡಿದೆ. ಅದನ್ನು ನನ್ನ ನೆಚ್ಚಿನ ಪ್ರಶಾಂತ್ ನೀಲ್ ಉದ್ಘಾಟಿಸಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

    ರವಿ ಬಸ್ರೂರ್@ವರ್ಕ್ ಫ್ರಮ್​ ವಿಲೇಜ್​: ಊರಲ್ಲಿ ಸದ್ದಿಲ್ಲದೆ ಏನ್​ ಮಾಡಿದ್ದಾರೆ ನೋಡಿ!!!

    ನಿನ್ನೆ ದೀಪಿಕಾ ಪಡುಕೋಣೆ ಹಾಗೇಕೆ ಮಾಡಿದ್ರು?!; ಎಲ್ಲ ತೆಗೆದ ಅವರಿಂದು ಫೀಲಿಂಗ್ ಹೇಳಿಕೊಂಡಿದ್ದಾರೆ…

    ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ನಮ್ಮ ಪಕ್ಷದ ಬೆಂಬಲಿತರು ಎಂದು ಹೇಳಿದ್ರೆ ಬೀಳುತ್ತೆ ಕೇಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts