ನವದೆಹಲಿ: ಮರಣದಂಡನೆ ಪ್ರಕರಣಗಳಿಗೆ ಸಂಬಂಧಿಸಿ ಸಂತ್ರಸ್ತರು ಮತ್ತು ಸಮಾಜ ಕೇಂದ್ರಿತ ಮಾರ್ಗದರ್ಶಿ ರಚನೆಗೆ ಮಾರ್ಗದರ್ಶನ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ನೀಡಿದೆ.
ಸುಪ್ರೀಂ ಕೋರ್ಟ್ಗೆ ಜನವರಿ 22ರಂದು ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಪ್ರಚಲಿತ ಚಾಲ್ತಿಯಲ್ಲಿರುವ ಮಾರ್ಗದರ್ಶಿ ಸೂತ್ರಗಳು ಕೇವಲ ಆರೋಪಿಗಳು ಮತ್ತು ಅಪರಾಧಿಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಮರಣದಂಡನೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರವನ್ನು 2014ರಲ್ಲಿ ರಚಿಸಲಾಗಿತ್ತು. ಅದು ಶತ್ರುಘ್ನ ಚೌಹಾಣ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಹಾಕಿಕೊಟ್ಟ ಮಾರ್ಗದರ್ಶಿ ಸೂತ್ರ ಎಂಬ ಅಂಶದತ್ತ ಗಮನಸೆಳೆದಿದೆ.
ಈ ಅರ್ಜಿ ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ಸಂಬಂಧಪಟ್ಟವರ ಪ್ರತಿಕ್ರಿಯೆಯನ್ನು ಕೋರಿದೆ. ಶತ್ರುಘ್ನ ಚೌಹಾಣ್ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದವರಿಗೆಲ್ಲರಿಗೂ ನೋಟಿಸ್ ಕಳುಹಿಸಿದೆ. (ಏಜೆನ್ಸೀಸ್)