More

    ಜೆಡಿಎಸ್​ ಭದ್ರಕೋಟೆ ರಾಮನಗರದಲ್ಲಿಂದು ಕಲ್ಲಡ್ಕ ಪ್ರಭಾಕರ್​ ಭಟ್​ ನೇತೃತ್ವದಲ್ಲಿ ಆರ್​ಎಸ್​ಎಸ್​ ಬೃಹತ್ ಪಥ ಸಂಚಲನ

    ರಾಮನಗರ: ರೇಷ್ಮೆ ನಗರಿ ರಾಮನಗರದಲ್ಲಿಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಪ್ರಭಾವಿ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ನೇತೃತ್ವದಲ್ಲಿ ಬೃಹತ್​ ಪಥಸಂಚನ ನಡೆಯಲಿದೆ.

    ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ತಿರುವ ನೀಡಿದ ಕ್ಷೇತ್ರ ಹಾಗೂ ಜೆಡಿಎಸ್​ ಭದ್ರ ಕೋಟೆ ಎಂದೇ ಹೆಸರಾಗಿರುವ ರಾಮನಗರದಲ್ಲಿ ಇಂದು ಕೇಸರಿ ಬಾವುಟಗಳು ರಾರಾಜಿಸಲಿವೆ.

    ನಗರದ ಎಂ.ಜಿ.ರಸ್ತೆ, ಬಾಲಗೇರಿ, ಮಾಗಡಿ ರಸ್ತೆ, ಜೂನಿಯರ್ ಕಾಲೇಜು ಸೇರಿದಂತೆ ನಗರದೆಲ್ಲೆಡೆ ಕೇಸರಿ ಬಾವುಟ ಹಾರಾಡಲಿದೆ. 7 ಸಾವಿರಕ್ಕೂ ಹೆಚ್ಚು ಗಣ ವೇಶಧಾರಿಗಳು ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ.

    ಇಂದು ಮಧ್ಯಾಹ್ನ 2 ಗಂಟೆಗೆ ಪಥ ಸಂಚಲನ ಆರಂಭವಾಗಲಿದೆ. ಪ್ರಮುಖ ರಸ್ತೆಗಳಾದ ಬಾಲಗೇರಿ, ಎಂ.ಜಿ ರಸ್ತೆ ಹಾಗೂ ಬಸ್ ನಿಲ್ದಾಣ ವೃತ್ತಗಳಲ್ಲಿ ಪಥ ಸಂಚಲನ ನಡೆಯಲಿದೆ. ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಕಲ್ಲಡ್ಕ ಪ್ರಭಾಕರ್ ಮಾತನಾಡಲಿದ್ದಾರೆ. ಜೆಡಿಎಸ್ ಕೋಟೆಯಲ್ಲಿ ಆರ್.ಎಸ್.ಎಸ್ ಒಗ್ಗೂಡಿಸಲು ರಾಮನಗರದಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸಲಾಗಿದೆ. (ದಿಗ್ವಿಜಯ ನ್ಯೂಸ್​ರಾಮನಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts