ರಾಮನಗರ: ರೇಷ್ಮೆ ನಗರಿ ರಾಮನಗರದಲ್ಲಿಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಪ್ರಭಾವಿ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಬೃಹತ್ ಪಥಸಂಚನ ನಡೆಯಲಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ತಿರುವ ನೀಡಿದ ಕ್ಷೇತ್ರ ಹಾಗೂ ಜೆಡಿಎಸ್ ಭದ್ರ ಕೋಟೆ ಎಂದೇ ಹೆಸರಾಗಿರುವ ರಾಮನಗರದಲ್ಲಿ ಇಂದು ಕೇಸರಿ ಬಾವುಟಗಳು ರಾರಾಜಿಸಲಿವೆ.
ನಗರದ ಎಂ.ಜಿ.ರಸ್ತೆ, ಬಾಲಗೇರಿ, ಮಾಗಡಿ ರಸ್ತೆ, ಜೂನಿಯರ್ ಕಾಲೇಜು ಸೇರಿದಂತೆ ನಗರದೆಲ್ಲೆಡೆ ಕೇಸರಿ ಬಾವುಟ ಹಾರಾಡಲಿದೆ. 7 ಸಾವಿರಕ್ಕೂ ಹೆಚ್ಚು ಗಣ ವೇಶಧಾರಿಗಳು ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಪಥ ಸಂಚಲನ ಆರಂಭವಾಗಲಿದೆ. ಪ್ರಮುಖ ರಸ್ತೆಗಳಾದ ಬಾಲಗೇರಿ, ಎಂ.ಜಿ ರಸ್ತೆ ಹಾಗೂ ಬಸ್ ನಿಲ್ದಾಣ ವೃತ್ತಗಳಲ್ಲಿ ಪಥ ಸಂಚಲನ ನಡೆಯಲಿದೆ. ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಕಲ್ಲಡ್ಕ ಪ್ರಭಾಕರ್ ಮಾತನಾಡಲಿದ್ದಾರೆ. ಜೆಡಿಎಸ್ ಕೋಟೆಯಲ್ಲಿ ಆರ್.ಎಸ್.ಎಸ್ ಒಗ್ಗೂಡಿಸಲು ರಾಮನಗರದಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸಲಾಗಿದೆ. (ದಿಗ್ವಿಜಯ ನ್ಯೂಸ್ರಾಮನಗ