More

    ಸೇವಾ ಅವಧಿ ಮುಗಿದಿದ್ದರೂ ದೇಶಸೇವೆಗೆ ಓಗೊಟ್ಟು ಹುತಾತ್ಮನಾದ ಹಾಸನದ ಯೋಧ!

    ಹಾಸನ: ಅರುಣಾಚಲ ಪ್ರದೇಶದ ಬೆಟಾಲಿಯನ್ 18ರಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಾಸನ ಜಿಲ್ಲೆಯ ಅರಕಲಗೂಡು ಅತ್ನಿ ಗ್ರಾಮದ ಯೋಧ ಮಲ್ಲೇಶ್ ಹುತಾತ್ಮರಾಗಿದ್ದಾರೆ.‌

    ಯುದ್ದ ಸಾಮಾಗ್ರಿಗಳನ್ನು ಗಡಿ ಭಾಗಕ್ಕೆ ಸಾಗಿಸುವ ಸಮಯದಲ್ಲಿ ಮಿಲಿಟರಿ ವಾಹನ ಮೇಲೆ ಗುಡ್ಡ ಕುಸಿದು ಸಾವು ಸಂಭವಿಸಿದೆ. ತೀವ್ರ ಗಾಯಗೊಂಡ ಮಲ್ಲೇಶ್‌ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ ಆಗಿರುವುದಾಗಿ ಮೂಲಗಳು ತಿಳಿಸಿವೆ.

    ಮಲ್ಲೇಗೌಡ ಹಾಗೂ ಪುಟ್ಟಮ್ಮ ಎಂಬುವರ ಪುತ್ರರಾಗಿರುವ ಮಲ್ಲೇಶ್ ಅವರ ಸೇವಾ ಅವಧಿ ಮುಗಿದಿತ್ತು. ಆದರೂ ದೇಶ ಸೇವೆ ಹಂಬಲದಲ್ಲಿ ಕೆಲಸ ಮುಂದುವರಿಸಿದ್ದರು. ಇವರು ಪತ್ನಿ ಪೂರ್ಣಿಮಾ ಹಾಗೂ ಮಕ್ಕಳಾದ ಋತ್ವಿಕ್, ಸಹನ್ ಅವರನ್ನು ಅಗಲಿಸಿದ್ದಾರೆ.

    ಮಂಗಳವಾರ ಯೋಧನ ಪಾರ್ಥೀವ ಶರೀರ ಸ್ವಗ್ರಾಮ ತಲುಪುವು ಸಾಧ್ಯತೆ ಇದೆ.

    ಲಡಾಖ್‌ ಸಂಘರ್ಷ: ಭಾರತಕ್ಕೆ ಜಪಾನ್‌ ಬೆಂಬಲ- ಚೀನಾಕ್ಕೆ ಛೀಮಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts