More

    ಸಿಡಿಲು ಸಹಿತ ಮಳೆಗೆ 3 ಕುರಿ ಸಾವು, ಕಬ್ಬು ನೆಲಸಮ


    ಹರಪನಹಳ್ಳಿ: ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಸಿಡಿಲು ಸಹಿತ ಮಳೆಯಿಂದಾಗಿ ಕೆರೆಗುಡಿಹಳ್ಳಿಯಲ್ಲಿ ಮೂರು ಕುರಿ ಸತ್ತಿದ್ದು, ಫಣಿಯಾಪುರದಲ್ಲಿ 2 ಎಕರೆ ಕಬ್ಬು ಬೆಳೆ ನೆಲಸಮವಾಗಿದೆ.

    ಅರಸೀಕೆರೆ ಹೋಬಳಿಯ ಕೆರೆಗುಡಿಹಳ್ಳಿ ಗ್ರಾಮದ ರೈತ ಬಸವರಾಜಪ್ಪನ 3 ಕುರಿ ಮೃತಪಟ್ಟಿದ್ದು, ಪಶು ವೈದ್ಯಾಧಿಕಾರಿ ಷಣ್ಮುಖಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫಣಿಯಾಪುರ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಗ್ರಾಮದ ರೈತ ಅಲೂರು ನಾಗಪ್ಪ ಅವರ ಜಮೀನಿನಲ್ಲಿ ಫಸಲಿಗೆ ಬಂದಿದ್ದ 2 ಎಕರೆ ಕಬ್ಬಿನ ಬೆಳೆ ನೆಲಕಚ್ಚಿದೆ. ಇನ್ನು ಹಿರೇಮೆಗಳಗೇರಿಯಲ್ಲಿ-3, ಉಚ್ಚಂಗಿದುರ್ಗ-3, ಕಾನಹಳ್ಳಿ-1, ಬಿಕ್ಕಿಮಟ್ಟಿ ತಾಂಡ-1, ದೇವರ ತಿಮ್ಲಾಪುರ-1, ಯಲ್ಲಾಪುರ-1 ಸೇರಿ ತಾಲೂಕಿನಲ್ಲಿ ಒಟ್ಟು 10 ಮನೆಗಳು ಭಾಗಶಃ ಜಖಂಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts