ಚೆನ್ನೈ: ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ನೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ನೋಟಿಸ್ ನೀಡಲಾಗಿದೆ. ಡಿಎಂಕೆ ಎಂಪಿ ಆರ್.ಎಸ್. ಭಾರತಿ ಈ ಸಂಬಂಧ ಅಣ್ಣಾಮಲೈಗೆ ಲೀಗಲ್ ನೋಟಿಸ್ ಜಾರಿ ಮಾಡಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ವಿರುದ್ಧ ತಪ್ಪು ಹೇಳಿಕೆ ನೀಡಿದ್ದನ್ನು ವಿರೋಧಿಸಿ ಈ ಮಾನನಷ್ಟ ಮೊಕದ್ದಮೆ ಹೂಡಿ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಅಣ್ಣಾಮಲೈ ಸ್ಟಾಲಿನ್ ಅವರ ಬಳಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೋರಬೇಕು, ಇನ್ಮುಂದೆ ತಪ್ಪು ಆರೋಪ ಮಾಡುವುದಿಲ್ಲ ಎಂದು ಒಪ್ಪಿಕೊಳ್ಳಬೇಕು ಇಲ್ಲವೇ ಮಾನನಷ್ಟ ಮೊತ್ತವಾಗಿ ನೂರು ಕೋಟಿ ರೂಪಾಯಿ ತೆರಬೇಕು ಎಂದು ನೋಟಿಸ್ ಜಾರಿ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ನನ್ನದು ತಮಿಳುನಾಡಿಗಾಗಿ ಹೋರಾಟ ಎಂದು ಹೇಳಿದ್ದಲ್ಲದೆ, ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಅವರ ಎಲ್ಲ ಬೆದರಿಕೆಗಳಿಗೂ ನ್ಯಾಯಾಲಯದಲ್ಲೇ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಆ ವಸ್ತುವಿನ ಮೇಲಿದೆ ‘ಐ ಲವ್ ಪಾಕಿಸ್ತಾನ್’ ಎಂಬ ಬರಹ; ಶುರುವಾಗಿದೆ ಮೂಲದ ಹುಡುಕಾಟ..