ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಹುದ್ದೆಯಲ್ಲಿ ಅಧಿಕಾರ ನಿರ್ವಹಿಸುತ್ತಾ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ದೇಶಾದ್ಯಂತದಿಂದ ಪೋಸ್ಟ್ ಕಾರ್ಡ್ ಬರೆದು ಅಭಿನಂದನೆ ಸಲ್ಲಿಸುವ ಅಭಿಯಾನ ನಡೆದಿದೆ. ಈ ಅಂಗವಾಗಿ ಮೈಸೂರಿನಲ್ಲಿ ಇಂದು ಸೇವೆ ಮತ್ತು ಸಮರ್ಪಣೆ ಉತ್ಸವ ಆಚರಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೋಸ್ಟ್ ಕಾರ್ಡ್ ಬರೆದು ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಲೋಕಸಭಾ ಸದಸ್ಯ ಪ್ರತಾಪಸಿಂಹ, ಶಾಸಕ ನಾಗೇಂದ್ರ, ಮೈಸೂರು ನಗರ ಜಿಲ್ಲಾಧ್ಯಕ್ಷ ಶ್ರೀವತ್ಸ ಮತ್ತು ಇತರ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ಕಾರ್ಡುಗಳನ್ನು ಪೋಸ್ಟ್ ಮಾಡಲಾಯಿತು.
ಮಗಳ ಪಾಡು ನೋಡಲಾಗದೆ ಪ್ರಾಣ ತೆತ್ತ ತಂದೆ! ಹಲವು ದಿನಗಳ ಕಾಲ ಮೊಬೈಲ್ನಲ್ಲೇ ಅಡಗಿದ್ದ ಸತ್ಯ!
ಚಾರ್ ಧಾಮ್ ಯಾತ್ರೆಗೆ ಸಂಪೂರ್ಣ ತೆರೆದ ಬಾಗಿಲು; ಯಾತ್ರಾರ್ಥಿಗಳಿಗೆ ಈ ದಾಖಲಾತಿಗಳು ಅಗತ್ಯ