ಎನ್.ಆರ್.ಪುರ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲ ಬ್ಯಾನರ್,ಪ್ಲೆಕ್ಸ್, ಬಂಟಿಂಕ್ಸ್ಗಳನ್ನು ಪಪಂ ಸಿಬ್ಬಂದಿ ತೆರವುಗೊಳಿಸಿದರು.
ಪಟ್ಟಣದ ಮುಖ್ಯರಸ್ತೆ ಹಾಗೂ 11 ವಾರ್ಡ್ಗಳಲ್ಲೂ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ, ಪೌರ ಕಾರ್ಮಿಕರು ಕೆಲವು ಗೋಡೆ ಬರಹಗಳಿಗೆ ಬಣ್ಣ ಬಳಿದಿದ್ದಾರೆ.ಕೆಲ ಬ್ಯಾನರ್ಗಳಿಗೆ ಬಟ್ಟೆ ಮುಚ್ಚಿದ್ದಾರೆ. ತಾಲೂಕಿನ ಮುತ್ತಿನಕೊಪ್ಪ ಸಮೀಪದ ಚಿಬ್ಬಳ್ಳಿಯಲ್ಲಿ ಚೆಕ್ಪೋಸ್ಟ್ ಪ್ರಾರಂಭಿಸಲಾಗಿದೆ. ತಾಲೂಕಿಗೆ ಪ್ರವೇಶ ಮಾಡುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಪೊಲೀಸ್, ಅರಣ್ಯ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಆರ್ಪಿಎ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಆರ್.ವಿ.ಮಂಜುನಾಥ್, ರೆವಿನ್ಯೂ ಇನ್ಸಪೆಕ್ಟರ್ ವಿಜಯಕುಮಾರ್ ಇತರರಿದ್ದರು.