ಲೋಡ್ ಶೆಡ್ಡಿಂಗ್ ವಿಚಾರವಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪ್ರಶ್ನಿಸಲಾಗಿದ್ದು, ಕಾಂಗ್ರೆಸ್ ಐದು ಭಾಗ್ಯಗಳ ಪೈಕಿ ಆರನೇ ಭಾಗ್ಯ ಕತ್ತಲೆ ಭಾಗ್ಯ ಎಂದು ವ್ಯಂಗ್ಯವಾಗಿ ಪ್ರತಿಕ್ರಯಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಲೋಡ್ ಶೆಡ್ಡಿಂಗ್ ಕುರಿತಂತೆ ಮಾತನಾಡಿದ ಅವರು, ನಾವು ಯಾವ ನಂಬಿಕೆಯನ್ನಿಟ್ಟು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದೇವೆಯೋ ಅದ್ಯಾವುದೂ ನಮಗೆ ಸಿಗುತ್ತಿಲ್ಲ. ಜನರ ನಿರೀಕ್ಷೆ ಹುಸಿಯಾಗಿದೆ. ನಾನು ಪ್ರತೀ ಬಾರಿಯೂ ಇದೇ ಕಾರಣಕ್ಕೆ ಐದು ಗ್ಯಾರಂಟಿಗಳ ಜತೆಗೆ 6ನೇ ಗ್ಯಾರಂಟಿಯಾಗಿ ಕತ್ತಲೆ ಭಾಗ್ಯವನ್ನ ಘೋಷಿಸಿದ್ರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಲೇ ಬಂದಿದ್ದೇನೆ.
ರೈತರ ಕಷ್ಟದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಯೋಚನೆಯೂ ಇಲ್ಲ. ಈಗಾಗಲೇ ನಾವು ಕತ್ತಲೆ ಭಾಗ್ಯವನ್ನ ಅನುಭವಿಸುತ್ತಿದ್ದೇವೆ. ಕರ್ನಾಟಕ ಅಭಿವೃದ್ಧಿಯಲ್ಲಿ ತುಂಬಾನೇ ಹಿಂದೆ ಉಳಿದಿದೆ.
ಈಗಾಗಲೇ ಕರ್ನಾಟಕದಲ್ಲಿ ಬೇಸಿಗೆ ಆರಂಭವಾಗ ಬೇಕಷ್ಟೇ ಅದಕ್ಕೂ ಮುನ್ನವೇ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದ್ದು, ಬೇಸಿಗೆಯ ಸಮಯದಲ್ಲಿ ಜನರು ಮತ್ತಷ್ಟು ಭಯಾನಕ ಸಂಕಷ್ಟಗಳನ್ನು ಎದುರಿಸುವ ಸಾಧ್ಯತೆ ಇದೆ. ನಾವು ಯಾವುದಕ್ಕೋಸ್ಕರ ಮತ ಹಾಕಿದ್ದೆವೊ ಅದು ನಮಗೆ ಸಿಗುತ್ತಿಲ್ಲ ಎಂದಿದ್ದಾರೆ.
ಐದು ಗ್ಯಾರಂಟಿಗಳ ಪೈಕಿ ಆರನೆಯದ್ದು ಕತ್ತಲೆ ಗ್ಯಾರಂಟಿ ಆಗಿರೋದ್ರಿಂದ ಅದು ಕಣುತ್ತಿಲ್ಲ ಎಂದಿದ್ದಾರೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ.
ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಮನೆಗಳ ಮೇಲೆ ಕಲ್ಲು ತೂರಿರುವ ಘಟನಡ ನಡೆದಿತ್ತು.
ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ಅಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ ಕಾಂಗ್ರೆಸ್ ಸರ್ಕಾರಕ್ಕೆ ದೃಢ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ ಎಂದು ಆ ಸಮಯದಲ್ಲೂ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.