More

    ಮಾರ್ಚ್​ 15ಕ್ಕೆ ವಿಧಾನ ಪರಿಷತ್ ಉಪ ಚುನಾವಣೆ; ಚುನಾವಣಾ ಆಯೋಗ ಘೋಷಣೆ

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್​ನ ಖಾಲಿ ಉಳಿದಿರುವ ಸ್ಥಾನಕ್ಕೆ ಮಾರ್ಚ್ 15ರಂದು ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಪರಿಷತ್​ ಉಪ ಸಭಾತಿ ಆಗಿದ್ದ ಎಸ್​.ಎಲ್​. ಧರ್ಮೇಗೌಡ ಅವರ ಅಗಲಿಕೆಯಿಂದ ಖಾಲಿ ಉಳಿದಿರುವ ಸ್ಥಾನಕ್ಕೆ ಈ ಚುನಾವಣೆ ನಡೆಯಲಿದೆ.

    ಚುನಾವಣೆ ಸಂಬಂಧ ಫೆ. 25ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ. 4 ಕಡೇ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮಾ. 8ರವರೆಗೂ ಅವಕಾಶವಿದೆ. ಮಾರ್ಚ್ 15ರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೂ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

    ಕರೊನಾ ಹಿನ್ನೆಲೆಯಲ್ಲಿ ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್​ ಧರಿಸುವುದು ಸೇರಿ ಕೋವಿಡ್​-19 ಕುರಿತ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ ಎಂದೂ ಆಯೋಗ ತಿಳಿಸಿದೆ. ಜೆಡಿಎಸ್​ ಪಕ್ಷದಿಂದ ಎಂಎಲ್​ಸಿ ಆಗಿದ್ದ ಧರ್ಮೇಗೌಡ(64) ಅವರ ಶವ ಚಿಕ್ಕಮಗಳೂರು ಜಿಲ್ಲೆಯ ರೈಲ್ವೇ ಹಳಿಯಲ್ಲಿ ಡಿ. 29ರಂದು ಪತ್ತೆಯಾಗಿತ್ತು.

    ಅದೇ ಆಸ್ಪತ್ರೆಯಲ್ಲಿ ಈಗ ಮತ್ತೊಬ್ಬ ವೈದ್ಯರ ಆತ್ಮಹತ್ಯೆ!; ಇನ್ನೆಂದಿಗೂ ಎಚ್ಚರಗೊಳ್ಳಲ್ಲ ಈ ಅರಿವಳಿಕೆ ತಜ್ಞ…

    ಡ್ಯೂಟಿ ಮಧ್ಯೆ ಮುಟ್ಟಾದರೆ…?! ಮಹಿಳಾ ಪೊಲೀಸರಿಗೆ ಸಿಕ್ಕಿದೆ ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts