ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ನ ಖಾಲಿ ಉಳಿದಿರುವ ಸ್ಥಾನಕ್ಕೆ ಮಾರ್ಚ್ 15ರಂದು ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಪರಿಷತ್ ಉಪ ಸಭಾತಿ ಆಗಿದ್ದ ಎಸ್.ಎಲ್. ಧರ್ಮೇಗೌಡ ಅವರ ಅಗಲಿಕೆಯಿಂದ ಖಾಲಿ ಉಳಿದಿರುವ ಸ್ಥಾನಕ್ಕೆ ಈ ಚುನಾವಣೆ ನಡೆಯಲಿದೆ.
ಚುನಾವಣೆ ಸಂಬಂಧ ಫೆ. 25ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ. 4 ಕಡೇ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮಾ. 8ರವರೆಗೂ ಅವಕಾಶವಿದೆ. ಮಾರ್ಚ್ 15ರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೂ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಕರೊನಾ ಹಿನ್ನೆಲೆಯಲ್ಲಿ ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಸೇರಿ ಕೋವಿಡ್-19 ಕುರಿತ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ ಎಂದೂ ಆಯೋಗ ತಿಳಿಸಿದೆ. ಜೆಡಿಎಸ್ ಪಕ್ಷದಿಂದ ಎಂಎಲ್ಸಿ ಆಗಿದ್ದ ಧರ್ಮೇಗೌಡ(64) ಅವರ ಶವ ಚಿಕ್ಕಮಗಳೂರು ಜಿಲ್ಲೆಯ ರೈಲ್ವೇ ಹಳಿಯಲ್ಲಿ ಡಿ. 29ರಂದು ಪತ್ತೆಯಾಗಿತ್ತು.
ಅದೇ ಆಸ್ಪತ್ರೆಯಲ್ಲಿ ಈಗ ಮತ್ತೊಬ್ಬ ವೈದ್ಯರ ಆತ್ಮಹತ್ಯೆ!; ಇನ್ನೆಂದಿಗೂ ಎಚ್ಚರಗೊಳ್ಳಲ್ಲ ಈ ಅರಿವಳಿಕೆ ತಜ್ಞ…