7 ದರೋಡೆಕೋರರ ಬಂಧನ

blank

ತರೀಕೆರೆ: ಪಟ್ಟಣ ಹೊರ ವಲಯದ ಅಮೃತಾಪುರ ಕ್ರಾಸ್ ಬಳಿ ದರೋಡೆಗೆ ಯತ್ನಿಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.

ಭದ್ರಾವತಿ ಮಹಮ್ಮದ್ ಸಾಬಿತ್ (24), ಜೀಶಾನ್ (20), ಸಲ್ಮಾನ್ ಪಾಷಾ (26), ನೂರುಲ್ಲಾ (21), ಶಾಹಿದ್ (18), ಮನ್ಸೂರ್ (25) ಹಾಗೂ ನಸ್ರುಲ್ಲಾ (21) ಬಂಧಿತ ಆರೋಪಿಗಳು. ಸೋಹೆಲ್ ಮತ್ತು ರೋಷನ್ ಪರಾರಿಯಾಗಿದ್ದಾರೆ.
ಶನಿವಾರ ತಡರಾತ್ರಿ ಅಜ್ಜಂಪುರ ಕ್ರಾಸ್ ಸಮೀಪ ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು ಮಾರಕಾಸ ಹಿಡಿದು ದರೋಡೆಗೆ ಹೊಂಚುಹಾಕುತ್ತಿದ್ದರು. ಬಂಧಿತರಿಂದ ಒಂದು ನಾಡ ಪಿಸ್ತೂಲ್, 1 ಲಾಂಗು, 3 ದೊಣ್ಣೆ, ರಾಡ್, ಹಗ್ಗ, ಖಾರದ ಪುಡಿ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕೃಷ್ಣನಾಯ್ಕ, ನಾಗೇಂದ್ರನಾಯ್ಕ, ಎಎಸ್‌ಐ ರವಿ, ಪೇದೆಗಳಾದ ಹರೀಶ್, ನಂಜುಂಡಸ್ವಾಮಿ, ರುದ್ರೇಶ್, ರಿಯಾಜ್, ಬಾಬು, ರಫಿಕ್, ರಮೇಶ್ ಇತರರಿದ್ದರು.

Share This Article

ಪ್ರತಿದಿನ ಶುಂಠಿ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಶುಂಠಿಯು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಸಾಲೆಯಾಗಿದೆ. ಇದನ್ನು ಪ್ರಪಂಚದಾದ್ಯಂತ ಅಡುಗೆ ಮತ್ತು ಗಿಡಮೂಲಿಕೆಗಳ ಪರಿಹಾರಗಳಲ್ಲಿ ಬಳಸಲಾಗುತ್ತದೆ.…

ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ ಮೆದುಳಿಗೂ ಮುಖ್ಯ; ಹೇಗೆ.. ಇಲ್ಲಿದೆ ಮಾಹಿತಿ | Health Tips

ವಯಸ್ಸು ಹೆಚ್ಚಾದಂತೆ ಸ್ಮರಣಶಕ್ತಿ ದುರ್ಬಲಗೊಳ್ಳುತ್ತದೆ. ಆದರೆ ಇಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಅಥವಾ…

ಭಾರತದ ಈ 7 ನಗರಗಳಲ್ಲಿ ಮಾಂಸದೂಟ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶ | No Meat City

No Meat Cities: ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಪಾಕಪದ್ಧತಿಗಳ ದೇಶ. ಇಲ್ಲಿನ ಸಂಸ್ಕೃತಿ,…