More

    27 ರಂದು ಎ.ಕೆ.ಎಸ್‌ಗೆ ನುಡಿನಮನ

    ಮಡಿಕೇರಿ: ಎ.ಕೆ.ಸುಬ್ಬಯ್ಯ ಅಭಿಮಾನಿ ಬಳಗದಿಂದ ಆ.27ರಂದು ನಗರದ ಅಂಬೇಡ್ಕರ್ ಭವನದಲ್ಲಿ ಎ.ಕೆ.ಸುಬ್ಬಯ್ಯ ಒಂದು ನೆನಪು ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಪ್ರಮುಖ ವಿ.ಪಿ.ಶಶಿಧರ್ ತಿಳಿಸಿದರು.

    ಎ.ಕೆ.ಸುಬ್ಬಯ್ಯ ನಿಧನರಾಗಿ ಆ.27ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದ ವೇದಿಕೆ ಪ್ರಮುಖ್ ಕೆ.ಎಲ್.ಅಶೋಕ್ ಭಾಗವಹಿಸಲಿದ್ದಾರೆ. ಅಲ್ಲದೆ ಪ್ರಸಕ್ತ ಭಾರತದ ಪ್ರಜಾಸತ್ಯದ ಸವಾಲುಗಳು ಎಂಬ ವಿಚಾರದ ಕುರಿತು ವಿಚಾರವಾದಿ ಡಾ.ಶಿವಸುಂದರ್ ವಿಚಾರ ಮಂಡಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಕೆಎಸ್ ಅವರ ಆದರ್ಶಗಳು ನಮಗೆ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ 2021ರಿಂದ ಸಮಾಜ ಮುಖಿ ಕೆಲಸದಲ್ಲಿ ಹಾಗೂ ಹೋರಾಟಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಯನ್ನು ಗುರುತಿಸಿ ಸನ್ಮಾನಿಸುವ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಸಮಾನ ಮನಸ್ಕರಿಂದ ಈಗಾಗಲೇ 10 ಲಕ್ಷ ರೂ. ಠೇವಣಿ ಇಡಲಾಗಿದೆ. ಇದರಿಂದ ಬರುವ ಬಡ್ಡಿ ಹಣದಿಂದ ಸಾಧಕರಿಗೆ ಗೌರವಧನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ಇದಕ್ಕೆ ಶೀಘ್ರವೇ ಮಂಡಳಿ ರಚಿಸಲಾಗುವುದು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ಮನುಶಣೈ, ತೆನ್ನೀರ ಮೈನಾ, ಕುಂಞಿ ಅಬ್ದುಲ್ಲ, ಕೆ.ಆರ್.ವಿದ್ಯಾಧರ್, ದೀರ್ಘಕೇಶಿ ಶಿವಣ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts