ಮೈಸೂರು: ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಕ್ರೂರಿಯೊಬ್ಬ ತನ್ನ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಚೆಟ್ಟನಹಳ್ಳಿಯ ದೇವರಾಜ್ ಅವರ 2ನೇ ಪತ್ನಿ ಪುಟ್ಟಮ್ಮ(40) ಕೊಲೆಯಾದ ದುರ್ದೈವಿ. ಪತ್ನಿಯ ಶೀಲ ಶಂಕಿಸಿ ನಿತ್ಯ ಕ್ಯಾತೆ ತೆಗೆಯುತ್ತಿದ್ದ ದೇವರಾಜ್, 21 ವರ್ಷ ತನ್ನೊಂದಿಗೆ ಸಂಸಾರ ನಡೆಸಿದ್ದ ಪತ್ನಿಯನ್ನೇ ಅಮಾನುಷವಾಗಿ ಕೊಂದಿದ್ದಾನೆ. ಮೊದಲ ಹೆಂಡತಿಯನ್ನೂ ಕೊಲೆ ಮಾಡಲು ಯತ್ನಿಸಿದ್ದ ದೇವರಾಜ್ ಜೈಲುವಾಸ ಅನುಭವಿಸಿದ್ದ. ಬಳಿಕ ಮೊದಲ ಹೆಂಡತಿಯಿಂದ ದೂರವಾದ ದೇವರಾಜ್, 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ವಿವಾಹವಾಗಿದ್ದ.
ದೇವರಾಜ್ ಮತ್ತು ಪುಟ್ಟಮ್ಮ ದಂಪತಿಗೆ 20 ವರ್ಷದ ಮಗಳು ಇದ್ದಾಳೆ. ಅನುಮಾನ ರೋಗ ಅಂಟಿಸಿಕೊಂಡಿದ್ದ ದೇವರಾಜ್, 2ನೇ ಪತ್ನಿಗೂ ಅನೈತಿಕ ಸಂಬಂಧ ಇದೆ ಎಂದು ಜಗಳ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳ ಹೆಚ್ಚಾಗಿತ್ತು. ಮಗಳು ಪವಿತ್ರಾ, ಸೋಮವಾರ ಕಾಲೇಜಿಗೆ ಹೋಗಿದ್ದಳು. ಈ ವೇಳೆ ಪತ್ನಿ ಜತೆ ಜಗಳ ತೆಗೆದಿದ್ದ. ರಾತ್ರಿ ಮನೆಯಲ್ಲೇ ಪತ್ನಿಯನ್ನು ರುಂಡ- ಮುಂಡ ಬೇರೆ ಆಗುವಂತೆ ಭೀಕರವಾಗಿ ಕೊಲೆ ಮಾಡಿದ್ದಾನೆ. ತಂದೆ ವಿರುದ್ಧ ಮಗಳು ಪವಿತ್ರಾ, ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮದುವೆ ಆದಾಗಿನಿಂದ ತನ್ನ ತಾಯಿಗೆ ತಂದೆ ಕೊಡುತ್ತಿದ್ದ ಚಿತ್ರಹಿಂಸೆಯನ್ನ ಬಿಚ್ಚಿಟ್ಟಿದ್ದಾಳೆ. ತಲೆಮರೆಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏಕಾಏಕಿ ವಾಹನ ತಡೆಯಂಗಿಲ್ಲ, ಟ್ರಾಫಿಕ್ ಪೊಲೀಸರಿಗೆ DGP ಖಡಕ್ ಸೂಚನೆ: ಎಎಸ್ಐ-ಮುಖ್ಯಪೇದೆ ಅಮಾನತು