More

    ನಿಧಿ ಆಸೆಗಾಗಿ ದುಷ್ಕೃತ್ಯ!

    ರೋಣ: ನಿಧಿ ಆಸೆಗಾಗಿ ದುಷ್ಕರ್ವಿುಗಳು ಜಮೀನೊಂದರಲ್ಲಿ ಬನ್ನಿ ಗಿಡದ ಸುತ್ತಲಿನ ಭೂಮಿ ಅಗೆದು ಅರೆಬರೆ ಮುಚ್ಚಿ ಓಡಿ ಹೋದ ಘಟನೆ ಎಳ್ಳಮಾವಾಸ್ಯೆ ರಾತ್ರಿ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಜರುಗಿದೆ.

    ನಿಧಿ ಇಲ್ಲವೆಂದು ತಿಳಿದ ಮೇಲೆ ಅಗೆದಿದ್ದ ತಗ್ಗನ್ನು ಮುಚ್ಚಿ ಅಲ್ಲಿಂದ ದುಷ್ಕರ್ವಿುಗಳು ಓಡಿಹೋಗಿದ್ದಾರೆ. ಭೂಮಿ ಅಗೆದ ಸ್ಥಳದಲ್ಲಿ ನಿಂಬೆ ಹಣ್ಣು, ಅಡಕೆ, ಎಲೆ, ಅರಿಶಿಣ-ಕುಂಕುಮ ಹಚ್ಚಿದ ಅಕ್ಕಿ ಸೇರಿದಂತೆ ಪೂಜೆಗೆ ಬಳಸಿದ ಸಾಮಗ್ರಿ, ಜ್ಯೋತಿಷ ಪುಸ್ತಕ, ಉಪಕರಣಗಳು ಪತ್ತೆಯಾಗಿದೆ.

    ಈ ಜಮೀನು ಕೊತಬಾಳ ಗ್ರಾಮದ ಶಿವಾನಂದ ಹುಲ್ಲೂರ ಎಂಬುವರಿಗೆ ಸೇರಿದೆ. ನಿಧಿಗಾಗಿ ಇಲ್ಲಿ ಭೂಮಿ ಅಗೆದದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ನಿಧಿಗಳ್ಳರು ಪೂಜೆ ಸಲ್ಲಿಸಿ ತಗ್ಗುಗಳನ್ನು ತೋಡಿ ಹೋಗಿದ್ದಾರೆ ಎಂದು ಶಿವಾನಂದ ತಿಳಿಸಿದರು.

    ‘ನಮ್ಮ ಜಮೀನಿನಲ್ಲಿನ ಲಕ್ಕಮ್ಮನ ಬಂಡೆಗೆ ಹಿರಿಯರ ಕಾಲದಿಂದಲೂ ಸುತ್ತಲಿನ ರೈತರು ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಈ ಜಮೀನು ಮುಗಳಿ ಹಾಗೂ ಕೊತಬಾಳ ಗ್ರಾಮದ ಸರಹದ್ದಿನಲ್ಲಿರುವುದರಿಂದ ಈ ಜಮೀನಿನಲ್ಲಿ ನಿಧಿ ಇದೆ ಎಂದು ಮುಗಳಿ ಹಾಗೂ ಕೊತಬಾಳ ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಾರೆ. ಇದನ್ನು ನಂಬಿದ ದುಷ್ಕರ್ವಿುಗಳು ನಿಧಿಯಾಸೆಗಾಗಿ ಇಲ್ಲಿ ಭೂಮಿ ಅಗೆದಿದ್ದಾರೆ’ ಎಂದು ಅವರು ಹೇಳಿದರು. ನಿಧಿ ಆಸೆಗಾಗಿ ಭೂಮಿ ಅಗೆದ ದುಷ್ಕರ್ವಿುಗಳನ್ನು ಬಂಧಿಸಬೇಕು ಎಂದು ಅಕ್ಕಪಕ್ಕದ ಜಮೀನುಗಳ ರೈತರು ಆಗ್ರಹಿಸಿದ್ದಾರೆ. ===========

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts