ರಾತ್ರಿ ವೇಳೆ ದೇವಾಲಯ ಹೊಕ್ಕು ಶೂಟಿಂಗ್! ಯೂಟ್ಯೂಬರ್​ಗೆ ಮತ್ತೆ ಎದುರಾಯ್ತು ಸಂಕಷ್ಟ

ಮಥುರ: ತಮ್ಮ ನಾಯಿಯನ್ನು ಬಲೂನಿಗೆ ಕಟ್ಟಿ ಆಕಾಶದಲ್ಲಿ ಹಾರಿಸಿದ್ದಕ್ಕಾಗಿ ಕೆಲವು ತಿಂಗಳ ಹಿಂದೆ ಪ್ರಾಣಿ ಹಿಂಸೆಯ ಆರೋಪದಡಿ ಬಂಧಿತರಾಗಿದ್ದ ದೆಹಲಿಯ ಯೂಟ್ಯೂಬರ್​​ ಗೌರವ್​ ಶರ್ಮಾ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃಂದಾವನದ ‘ನಿಧಿವನ ರಾಜ್​’ ದೇವಾಲಯದಲ್ಲಿ ರಾತ್ರಿ ವೇಳೆ ವಿಡಿಯೋ ಶೂಟ್​ ಮಾಡಿದ್ದಕ್ಕಾಗಿ ಅವರನ್ನು ಮಥುರಾ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಕೃಷ್ಣ ದೇವಾಲಯ ನಿಧಿವನ ರಾಜ್​ಗೆ ರಾತ್ರಿ ಹೊತ್ತು ಯಾರೂ ಪ್ರವೇಶಿಸುವಂತಿಲ್ಲ. ಈ ಸಮಯದಲ್ಲಿ ಭಗವಾನ್​ ಕೃಷ್ಣ ಮತ್ತು ರಾಧೆ ಆ ಜಾಗದಲ್ಲಿ … Continue reading ರಾತ್ರಿ ವೇಳೆ ದೇವಾಲಯ ಹೊಕ್ಕು ಶೂಟಿಂಗ್! ಯೂಟ್ಯೂಬರ್​ಗೆ ಮತ್ತೆ ಎದುರಾಯ್ತು ಸಂಕಷ್ಟ