ಯಾದಗಿರಿಯಲ್ಲಿ ಗುಡುಗು ಸಹಿತ ಭಾರಿ ಮಳೆ! ಸಿಡಿಲು ಬಡಿದು ಹಸು ಸಾವು

ಯಾದಗಿರಿ: ಜಿಲ್ಲೆಯಾದ್ಯಂತ ಇಂದು ಗುಡುಗು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಸ್ವಲ್ಪ ತಂಗಾಳಿಯನ್ನು ಮಳೆ ತಂದಿದ್ದರೆ, ಅದರೊಂದಿಗೆ ಕೆಲ ಸಮಸ್ಯೆಗಳನ್ನೂ ಸೃಷ್ಟಿಸಿ ಹೋಗಿದೆ. ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್​ ಕಂಬಗಳು ನೆಲಕ್ಕುರಳಿವೆ. ಸುಭಾಷ್​ ಚೌಕ್​ ಹತ್ತಿರವಿರುವ ಉಳ್ಳೆಸೂಗುರ್ ಕಾಂಪ್ಲೆಕ್ಸ್​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಓರ್ವ ಮಹಿಳೆ ಗಾಯಾಳುವಾಗಿರುವುದಾಗಿ ಹೇಳಲಾಗಿದೆ. ಕಾಂಪ್ಲೆಕ್ಸ್ ಬಳಿ ಇದ್ದ ಹತ್ತಾರು ಬೈಕ್​ಗಳು ನುಜ್ಜುಗುಜ್ಜಾಗಿರುವ ಮಾಹಿತಿಯಿದೆ. ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಾಗಪ್ಪ … Continue reading ಯಾದಗಿರಿಯಲ್ಲಿ ಗುಡುಗು ಸಹಿತ ಭಾರಿ ಮಳೆ! ಸಿಡಿಲು ಬಡಿದು ಹಸು ಸಾವು