ದೇವಸ್ಥಾನದ ನೀರಿನ ಟ್ಯಾಂಕ್ ಒಡೆದು ಮೈಮೇಲೆ ಬಿದ್ದು ಮಹಿಳೆ ಸಾವು: ವಾರ್ಷಿಕ ಮಾರಿಪೂಜೆ ವೇಳೆ ಸಂಭವಿಸಿದ ದುರಂತ

ಕಾರ್ಕಳ: ಮಾರಿಪೂಜೆ ನಡೆಯುತ್ತಿದ್ದ ದೇವಸ್ಥಾನದ ನೀರಿನ ಟಾಂಕ್ ಕುಸಿದು ಮೈಮೇಲೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟು ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಂದಳಿಕೆ ಗ್ರಾಮದ ಮಾವಿನಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದೆ. ನಂದಳಿಕೆ ಗ್ರಾಮದ ಮಾವಿನಕಟ್ಟೆಯ ಪುನೀತ್ ಎಂಬುವರ ತಾಯಿ ಲತಾ ಮೊಯ್ಲಿ(50) ಮತ್ತು ತಂಗಿ ಪೂಜಾ ಮಂಗಳವಾರ ರಾತ್ರಿ ಮನೆಯ ಬಳಿಯಿರುವ ಮಹಮ್ಮಾಯಿ ದೇವಸ್ಥಾನ ವರ್ಷಾವಧಿ ಮಾರಿಪೂಜೆಗೆ ಹೋಗಿದ್ದರು. ರಾತ್ರಿ 10.30ರ ವೇಳೆಗೆ ಮಾರಿಪೂಜೆಯ ಅನ್ನದಾನದಲ್ಲಿ ಊಟ ಮಾಡಿ ಬಟ್ಟಲು ತೊಳೆಯಲು ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಮಾಡಿದ್ದ ನಳ್ಳಿ ಹತ್ತಿರ … Continue reading ದೇವಸ್ಥಾನದ ನೀರಿನ ಟ್ಯಾಂಕ್ ಒಡೆದು ಮೈಮೇಲೆ ಬಿದ್ದು ಮಹಿಳೆ ಸಾವು: ವಾರ್ಷಿಕ ಮಾರಿಪೂಜೆ ವೇಳೆ ಸಂಭವಿಸಿದ ದುರಂತ