ಸಿಎಂ ಸ್ಥಾನಕ್ಕಾಗಿ ‘ಬಂಡೆ’ದ್ದ ಡಿ.ಕೆ.ಶಿವಕುಮಾರ್​ ಮನವೊಲಿಸಿದ್ಯಾರು?

ನವದೆಹಲಿ: ಕಳೆದ ಕೆಲವು ದಿನಗಳಿಂದ ದೊಡ್ಡ ಕಗ್ಗಂಟಾಗಿದ್ದ ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರ ಕೊನೆಗೂ ಬಗೆಹರಿದಿದೆ. ಆದರೆ ಈ ಸ್ಥಾನಕ್ಕಾಗಿ ಬಂಡೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಡಿಸಿಎಂ ಸ್ಥಾನ ಒಪ್ಪುವಂತೆ ಮನವೊಲಿಸಿದ್ಯಾರು ಎಂಬುದೂ ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನನಗೇ ಸಿಎಂ ಸ್ಥಾನ ಕೊಡಬೇಕು ಎಂದು ತಮ್ಮದೇ ಆದ ಕಾರಣ-ಸಮರ್ಥನೆಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಪಟ್ಟು ಹಿಡಿದಿದ್ದರು. ಕೊನೆಗೆ ಇಬ್ಬರ ಮನವೊಲಿಕೆ ಕಷ್ಟವಾಗಿ ಸಿಎಂ ಸ್ಥಾನ ಆಯ್ಕೆ ಹೈಕಮಾಂಡ್​ಗೆ ಬಿಡಲಾಗಿತ್ತು. ಅದಾಗ್ಯೂ … Continue reading ಸಿಎಂ ಸ್ಥಾನಕ್ಕಾಗಿ ‘ಬಂಡೆ’ದ್ದ ಡಿ.ಕೆ.ಶಿವಕುಮಾರ್​ ಮನವೊಲಿಸಿದ್ಯಾರು?