ಗುಬ್ಬೆದ್ದು ನಾರುತ್ತಿದೆ ತ್ಯಾಜ್ಯ ರಾಶಿ-ವಿಲೇವಾರಿಗೆ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿ, ಸಾಂಕ್ರಾಮಿಕ ರೋಗದ ಭೀತಿ

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ ನಾವು ಅಧಿಕಾರಕ್ಕೆ ಬಂದರೆ ತ್ಯಾಜ್ಯ ವಿಲೇವಾರಿ ನಡೆಸಿ ಮಂಜೇಶ್ವರವನ್ನು ದುರ್ಗಂಧಮುಕ್ತಗೊಳಿಸುತ್ತೇವೆಂಬ ಭರವಸೆಯೊಂದಿಗೆ ಅಧಿಕಾರಕ್ಕೇರಿದವರ ಕಾಲಾವಧಿ ಮುಗಿಯಲು ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಆದರೆ ಮಂಜೇಶ್ವರದ ಎಲ್ಲೆಡೆ ತ್ಯಾಜ್ಯ ತುಂಬಿ ವಿಲೇವಾರಿಗೆ ಕ್ರಮ ಇಲ್ಲದೆ ಗುಬ್ಬೆದ್ದು ನಾರುತ್ತಿದು,್ದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಪಂಚಾಯಿತಿ ಅಧಿಕೃತರು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ. ಆದರೆ, ಸಮಸ್ಯೆಗೆ ಇಂದಿಗೂ ಪರಿಹಾರ ದೊರೆಯುತ್ತಿಲ್ಲವೆಂಬುದು ವಿಪರ್ಯಾಸವಾಗಿದೆ. … Continue reading ಗುಬ್ಬೆದ್ದು ನಾರುತ್ತಿದೆ ತ್ಯಾಜ್ಯ ರಾಶಿ-ವಿಲೇವಾರಿಗೆ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿ, ಸಾಂಕ್ರಾಮಿಕ ರೋಗದ ಭೀತಿ