ಸಾಕಿದ ಹೋರಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ರೈತ: ಕೇಕ್​ ಕತ್ತರಿಸಿ, ಊರಿಗೆಲ್ಲ ಊಟ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ರೈತರೊಬ್ಬರು ತಾವು ಸಾಕಿದ ಹೋರಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಮಸಬಿನಾಳ ಗ್ರಾಮದ ಜನರೆಲ್ಲರನ್ನು ಸೇರಿಸಿ 5 ವರ್ಷದ ಹಿಂದೆ ತಮ್ಮ ಮನೆಯಲ್ಲಿ ಹುಟ್ಟಿದ ಹೋರಿಗೆ ರೈತ ಮಲ್ಲಪ್ಪ ಗಾಜರೆ ಅವರು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೋರಿ ಹುಟ್ಟಿದಾಗಲೇ ಹೋರಿಗೆ ಪ್ರೀತಿಯಿಂದ ರಾಜ ಅಂತಾ ಹೆಸರಿಟ್ಟಿದ್ದಾರೆ. ಪ್ರತಿ ವರ್ಷವೂ ರಾಜನ ಬರ್ತಡೇ ಮಾಡುತ್ತಾ ಬರುತ್ತಿದ್ದಾರೆ. ಹೋರಿಯ ಬರ್ತಡೇ ಹಿನ್ನೆಲೆ ಮಸಿಬಿನಾಳ ಗ್ರಾಮದಲ್ಲಿ ಸಂಭ್ರಮ ಮನೆ … Continue reading ಸಾಕಿದ ಹೋರಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ರೈತ: ಕೇಕ್​ ಕತ್ತರಿಸಿ, ಊರಿಗೆಲ್ಲ ಊಟ