ಎಲ್ಲ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ; ಡಾ.ಪಾವಗಡ ಪ್ರಕಾಶರಾವ್ ಅಭಿಮತ

ಬೆಂಗಳೂರು: ಜಗತ್ತಿನ ಎಲ್ಲ ಗ್ರಂಥಗಳಲ್ಲಿನ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಸಿಗುವುದು ಭಗವದ್ಗೀತೆಯಲ್ಲಿ ಮಾತ್ರ ಎಂದು ವಿದ್ವಾಂಸ ಡಾ. ಪಾವಗಡ ಪ್ರಕಾಶರಾವ್ ಅಭಿಪ್ರಾಯಿಸಿದ್ದಾರೆ. ಮಲ್ಲೇಶ್ವರದಲ್ಲಿ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಅಖಂಡ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಭಗವದ್ಗೀತೆ ಜಗತ್ತಿನ ಮೇರುಕೃತಿಯಾಗಿದ್ದು, ಇದರಲ್ಲಿ ಜಗತ್ತಿನ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ. ಇದನ್ನು ಸ್ವತಃ ವಿದೇಶೀಯರೇ ಒಪ್ಪಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವಾರು ಖ್ಯಾತನಾಮರಿಗೆ ದಿಗ್ದರ್ಶನ ಮಾಡಿಸಿದ ಭಗವದ್ಗೀತೆಯು ವಿಶ್ವಮಾನ್ಯ ಗ್ರಂಥ. ಅಖಂಡ ಗೀತಾ ಪಾರಾಯಣದಂತಹ ಕಾರ್ಯಕ್ರಮದಿಂದ … Continue reading ಎಲ್ಲ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ; ಡಾ.ಪಾವಗಡ ಪ್ರಕಾಶರಾವ್ ಅಭಿಮತ