ಕೇರಳದಲ್ಲಿ ಭೀಕರ ಮಳೆಗೆ ಜನ ತತ್ತರ: ಭಾಗಶಃ ಮುಳುಗಿದ ಬಸ್​ನಿಂದ ಹೊರಬರಲು ಪ್ರಯಾಣಿಕರ ಪರದಾಟ

ತಿರುವನಂತಪುರ: ದೇವರ ನಾಡು ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಐದು ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜಲಾವೃತಗೊಂಡ ರಸ್ತೆಯಲ್ಲಿ ಬಸ್​ ಒಂದು ಭಾಗಶಃ ಮುಳುಗಡೆಯಾಗಿದ್ದು, ಪ್ರಯಾಣಿಕರು ಬಸ್​ನಿಂದ ಹೊರಗಡೆ ಬರಲು ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೊಂದು ವೈರಲ್​ ವಿಡಿಯೋದಲ್ಲಿ ಕೊಟ್ಟಾಯಂ ಗ್ರಾಮೀಣ ಭಾಗದಲ್ಲಿ ಸುರಿದ ಭಾರೀ ಮಳೆಗೆ ಇಡೀ ಏರಿಯಾ ನದಿಯಂತಾಗಿದ್ದು, ಕೊಚ್ಚಿ ಹೋಗುತ್ತಿರುವ ಕಾರನ್ನು ತಡೆಯುವ ಪ್ರಯತ್ನವನ್ನು ಜನರು ಮಾಡುತ್ತಿರುವುದನ್ನು ಕಾಣಬಹುದು. ಅಂದಹಾಗೆ … Continue reading ಕೇರಳದಲ್ಲಿ ಭೀಕರ ಮಳೆಗೆ ಜನ ತತ್ತರ: ಭಾಗಶಃ ಮುಳುಗಿದ ಬಸ್​ನಿಂದ ಹೊರಬರಲು ಪ್ರಯಾಣಿಕರ ಪರದಾಟ