ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿ ಆಚರಣೆ

ಬೆಂಗಳೂರು: ಅಹಿಂಸೋ ಪರಮೋಧರ್ಮ ಎಂಬ ಧ್ಯೇಯವಾಕ್ಯವನ್ನು ಜಗತ್ತಿಗೆ ನೀಡಿದ ಜೈನಧರ್ಮದ 24ನೇ ತೀರ್ಥಂಕರರಾದ ಮಹಾವೀರರ ಜಯಂತಿ ಅಂಗವಾಗಿ ಭಾನುವಾರ ನಗರದ ವಿವಿದೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತೇರಾಪಂಥ್ ಜ್ಞಾನ ಬೆಂಗಳೂರು ಶಾಖೆಯು ಟೌನ್‌ಹಾಲ್ ಮುಂಭಾಗದಿಂದ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಜೈನಸಮುದಾಯದ ಮುನಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ ಬಿತ್ತಿಪತ್ರಗಳ ಪ್ರದರ್ಶನ ಹಾಗೂ ದುಶ್ಚಟಗಳಿಂದ ದೂರವಿರುವಂತೆ ಜನರಿಗೆ ಜಾಗೃತಿ ಮೂಡಿಸುವ ಪ್ರದರ್ಶನ ಮಾಡಿದರು. ಜೈನ ಯುವ ಸಂಘಟನೆಯು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶವನ್ನು ಆಯೋಜಿಸಿತ್ತು. ಜೈನ ಆಚಾರ್ಯರು, ಸಾಧು-ಸಾಧ್ವಿಗಳು … Continue reading ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿ ಆಚರಣೆ