ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!

ಬೆಂಗಳೂರು: ಇದಕ್ಕೆ ಕಾರಣ ಗ್ರಹಚಾರವೋ, ಬಿಬಿಎಂಪಿಯೋ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಈ ಘಟನೆ ವ್ಯಕ್ತಿಯೊಬ್ಬ ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿರುವುದಂತೂ ನಿಜ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಈ ಪ ನಡೆದಿದೆ. ದ್ವಿಚಕ್ರ ವಾಹನ ಸವಾರ ಶ್ರೀಧರ್ ಈ ಪ್ರಕರಣದಲ್ಲಿ ಗಾಯಗೊಂಡವರು. ಇವರು ಇಂದು ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಜೆ.ಪಿ.ನಗರ 21ನೇ ಮುಖ್ಯರಸ್ತೆಯಲ್ಲಿ ಮರದ ಕೊಂಬೆ ವಾಹನದ ಮೇಲೇ ಬಿದ್ದಿದೆ. ಪರಿಣಾಮವಾಗಿ ಶ್ರೀಧರ್ ಕಾಲು ಮುರಿದು ಹೋಗಿದ್ದು, ತಲೆಗೂ ಗಂಭೀರ ಗಾಯವಾಗಿದೆ. ಬೈಕ್ ಕೂಡ ಜಖಂಗೊಂಡಿದೆ. … Continue reading ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!