ನಿಮ್ಮೂರ ರಾಮನನ್ನು ದಾಖಲಿಸಿ! ಸ್ವಗ್ರಾಮ ಫೌಂಡೇಷನ್​ನಿಂದ ವಿಭಿನ್ನ ಅಭಿಯಾನ

ರಾಮಕಿಶನ್​ ಕೆ.ವಿ. ಬೆಂಗಳೂರುಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮಮಂದಿರ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ. ಈ ಮೂಲಕ ದೇಶಾದ್ಯಂತ ಇರುವ ರಾಮಭಕ್ತರು ಒಂದಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ‘ಸ್ವಗ್ರಾಮ ಫೌಂಡೇಷನ್​’ ವಿಭಿನ್ನವಾದ ಅಭಿಯಾನವೊಂದನ್ನು ಕೈಗೆತ್ತಿಕೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿಯೂ ಕುತೂಹಲ ಮೂಡಿಸುವಂತಹ ಸಂಗತಿಯೊಂದು ಇದ್ದೇ ಇರುತ್ತದೆ. ಅವುಗಳು ಸ್ಥಳಿಯ ಇತಿಹಾಸ, ಸಂಸತಿ, ಆಚರಣೆ, ಪದ್ಧತಿಯನ್ನು ತಿಳಿಸಿಕೊಡುತ್ತದೆ. ಇಂತಹ ವಿಚಾರಗಳು ಅಳಿದು ಹೋಗದೆ, ಮುಂದಿನ ತಲೆಮಾರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ‘ಸ್ವಗ್ರಾಮ ಫೌಂಡೇಷನ್​’ ಡಿಜಿಟಲ್​ ರೂಪದಲ್ಲಿ ದಾಖಲೀಕರಣ ಮಾಡಿಕೊಂಡು ಬರುತ್ತಿದೆ. … Continue reading ನಿಮ್ಮೂರ ರಾಮನನ್ನು ದಾಖಲಿಸಿ! ಸ್ವಗ್ರಾಮ ಫೌಂಡೇಷನ್​ನಿಂದ ವಿಭಿನ್ನ ಅಭಿಯಾನ