ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!

ಪಟ್ನಾ: ಬಿಹಾರದ ನಿವಾಸಿಯೊಬ್ಬ ತನ್ನ ಖಾತೆಗೆ ತಪ್ಪಾಗಿ ಜಮಾ ಆದ ಐದೂವರೆ ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಹಿಂದುರುಗಿಸಲು ನಿರಾಕರಿಸಿದ್ದಾನೆ. ಆ ಹಣವನ್ನು ಪ್ರಧಾನಿ ಮೋದಿ ತನಗೆ ಕಳುಹಿಸಿದ್ದಾರೆಂದು ಭಾವಿಸಿ, ಪೂರ್ಣವಾಗಿ ಖರ್ಚು ಮಾಡಿಬಿಟ್ಟಿರುವುದಾಗಿ ಹೇಳುತ್ತಿದ್ದಾನೆ. ಕಳೆದ ಮಾರ್ಚ್​ನಲ್ಲಿ, ಬಿಹಾರದ ಖಾಗರಿಯ ಜಿಲ್ಲೆಯ ಗ್ರಾಮೀಣ ಬ್ಯಾಂಕು, ಭಕ್ತಿಯಾರ್​ಪುರ ಗ್ರಾಮದ ನಿವಾಸಿ ರಂಜಿತ್​ ದಾಸ್​​ ಖಾತೆಗೆ ತಪ್ಪಾಗಿ 5.5 ಲಕ್ಷ ರೂ.ಗಳನ್ನು ಜಮಾ ಮಾಡಿತ್ತು. ಆದರೆ ಈ ಬಗ್ಗೆ ಹಲವು ನೋಟೀಸುಗಳನ್ನು ನೀಡಿ ಹಣ ಹಿಂತಿರುಗಿಸುವಂತೆ ಕೇಳಿದರೂ, ಹಣವನ್ನೆಲ್ಲಾ ವ್ಯಯಿಸಿರುವುದಾಗಿ … Continue reading ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!