ಹೆದ್ದಾರಿಗೆ ಬಂದ ಹಾವನ್ನು ಉಳಿಸಲು ಹೋಗಿ ಎಡವಟ್ಟು; ಟ್ರಕ್ ಚಾಲಕನಿಂದ ಸರಣಿ ಅಪಘಾತ!

ಚಿಕ್ಕಬಳ್ಳಾಪುರ: ಅಡ್ಡ ಬಂದ ಹಾವಿನ ಮೇಲೆ ವಾಹನ ಹತ್ತುವುದನ್ನು ಟ್ರಕ್ ಚಾಲಕ ತಪ್ಪಿಸಲು ಹೋಗಿ ಬುಧವಾರ ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಒಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರು- ಹೈದರಾಬಾದ್ ವಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ರಕ್ ಚಾಲಕ ರಸ್ತೆಯಲ್ಲಿ ಹಾವು ಹೋಗುತ್ತಿರುವುದನ್ನು ಕಂಡು ಕೂಡಲೇ ಬ್ರೇಕ್ ಹಾಕಿದ್ದಾನೆ. ಇದರ ಹಿಂಬದಿಯಲ್ಲಿ ಟಾಟಾ ಏಸ್ ಬರುತ್ತಿತ್ತು. ಅದರ ಹಿಂದೆ ಕಾರು ಮತ್ತು ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ … Continue reading ಹೆದ್ದಾರಿಗೆ ಬಂದ ಹಾವನ್ನು ಉಳಿಸಲು ಹೋಗಿ ಎಡವಟ್ಟು; ಟ್ರಕ್ ಚಾಲಕನಿಂದ ಸರಣಿ ಅಪಘಾತ!