ಐದೂವರೆ ವರ್ಷಗಳಿಂದ ಒಂದೂ ವಾರ ತಪ್ಪದೇ ನಡೆದಿದೆ ಸಸ್ಯಾಗ್ರಹ; ಇದರ ಹಿಂದಿದೆ ‘ಅದಮ್ಯ ಚೇತನ’

ಬೆಂಗಳೂರು: ವರ್ಷಕ್ಕೊಮ್ಮೆ ವನಮಹೋತ್ಸವ ಎಂದೋ, ಜನ್ಮದಿನ ಎಂದೋ ಯಾರಾದರೂ ಒಂದೋ ಎರಡೋ ಗಿಡ ನೆಡುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಇವರು ಕಳೆದ ಐದೂವರೆ ವರ್ಷಗಳಿಂದ ಒಂದೇ ಒಂದು ವಾರವೂ ತಪ್ಪದೇ ಗಿಡಗಳನ್ನು ನೆಡುತ್ತ ಬಂದಿದ್ದಾರೆ. ಹೀಗೊಂದು ಸಾಧನೆ ಮಾಡುವುದಕ್ಕೆ ಅದಮ್ಯ ಚೇತನ ಇರಬೇಕು. ಅಷ್ಟಕ್ಕೂ ಇಂಥದ್ದೊಂದು ಸಾಧನೆಯನ್ನು ಸಂಸದರಾಗಿದ್ದ ಅನಂತಕುಮಾರ್ ಅವರು ಹುಟ್ಟುಹಾಕಿರುವ ‘ಅದಮ್ಯ ಚೇತನ’ ಸಂಸ್ಥೆ ಮಾಡಿದೆ. ಕಳೆದು ಐದೂವರೆ ವರ್ಷಗಳಿಂದ ಪ್ರತಿವಾರವೂ ನಾವು ಇದನ್ನು ತಪ್ಪದೇ ಮಾಡಿಕೊಂಡು ಬರುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ … Continue reading ಐದೂವರೆ ವರ್ಷಗಳಿಂದ ಒಂದೂ ವಾರ ತಪ್ಪದೇ ನಡೆದಿದೆ ಸಸ್ಯಾಗ್ರಹ; ಇದರ ಹಿಂದಿದೆ ‘ಅದಮ್ಯ ಚೇತನ’