ಪಟಾಕಿ ಅಂಗಡಿಗೆ ಬೆಂಕಿ: ದೀಪಾವಳಿ ಹಬ್ಬದ ಖರೀದಿಗೆ ಹೋದ ಐವರ ಸಜೀವ ದಹನ!

ಚೆನ್ನೈ: ದೀಪಾವಳಿ ಹಬ್ಬ ಎಂದರೆ ಎಲ್ಲೆಡೆ ಪಟಾಕಿಗಳ ಸಂಭ್ರಮ. ಪಟಾಕಿ ಹೊಡೆದು ದೀಪಾವಳಿಯನ್ನು ಸಂಭ್ರಮಿಸುವ ಸಲುವಾಗಿ ಪಟಾಕಿ ಖರೀದಿಗೆ ಹೋದ ಐವರು ಪಟಾಕಿ ಅಂಗಡಿಯಲ್ಲಿಯೇ ಸಜೀವವಾಗಿ ದಹಿಸಿಹೋದ ದಾರುಣ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಶಂಕರಪುರದಲ್ಲಿ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನವಾಗಿದೆ. ಪಟಾಕಿ ಖರೀದಿಗೆ ಈ ಅಂಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದ್ದಕ್ಕಿದ್ದಂತೆಯೇ ಬೆಂಕಿ ಸ್ಫೋಟಗೊಂಡಿದೆ. ಏನಾಯಿತು ಎಂದು ನೋಡುವಷ್ಟರಲ್ಲಿಯೇ ಬೆಂಕಿ ಕೆನ್ನಾಲಿಗೆ ಚಾಚಿ ಅಕ್ಕಪಕ್ಕದ ಅಂಗಡಿಗೂ ಹೊತ್ತಿಕೊಂಡಿದೆ. … Continue reading ಪಟಾಕಿ ಅಂಗಡಿಗೆ ಬೆಂಕಿ: ದೀಪಾವಳಿ ಹಬ್ಬದ ಖರೀದಿಗೆ ಹೋದ ಐವರ ಸಜೀವ ದಹನ!