ವರದಕ್ಷಿಣೆಗೆ ಕೂಡಿದ್ದ 75 ಲಕ್ಷ ರೂ. ಬಡ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಕೊಟ್ಟ ವಧು: ಎಲ್ಲೆಡೆ ಶ್ಲಾಘನೆಗಳ ಮಹಾಪೂರ

ಜೈಪುರ (ರಾಜಸ್ಥಾನ): ವರದಕ್ಷಿಣೆಯ ರೂಪದಲ್ಲಿ ಲಕ್ಷಾಂತರ ರೂಪಾಯಿ ನೀಡುವುದು ಕೆಲವು ಪ್ರದೇಶಗಳಲ್ಲಿ ಮಾಮೂಲಾಗಿದೆ. ಅದರಲ್ಲಿಯೂ ರಾಜಸ್ಥಾನದಲ್ಲಿ ವರದಕ್ಷಿಣೆಯೆಂಬುದು ಬೃಹದಾಕಾರವಾಗಿ ಬೆಳೆದಿದೆ. ಈ ಮಧ್ಯೆ ಇಲ್ಲಿಯ ವಧುವೊಬ್ಬಳು ಇದೀಗ ಭಾರಿ ಸುದ್ದಿಯಲ್ಲಿದ್ದು, ಎಲ್ಲೆಡೆಯಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಬಾರ್ಮರ್​​ ನಗರದ ಕಿಶೋರ್​ ಸಿಂಗ್ ಕಾನೋಡ್​ ಅವರ ಮಗಳಾಗಿರುವ ಅಂಜಲಿ ಕನ್ವರ್​​ ಎಂಬಾಕೆ ತನಗೆ ವರದಕ್ಷಿಣೆಗಾಗಿ ಕೂಡಿಟ್ಟ 75 ಲಕ್ಷ ರೂ. ಹಣವನ್ನು ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಟ್ಟಲು ನೀಡಿದ್ದಾಳೆ. ಮಗಳಿಗೆ ವರದಕ್ಷಿಣೆ ನೀಡಲು ಕಿಶೋರ್‌ ಸಿಂಗ್‌ ಅವರು 75 ಲಕ್ಷ … Continue reading ವರದಕ್ಷಿಣೆಗೆ ಕೂಡಿದ್ದ 75 ಲಕ್ಷ ರೂ. ಬಡ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಕೊಟ್ಟ ವಧು: ಎಲ್ಲೆಡೆ ಶ್ಲಾಘನೆಗಳ ಮಹಾಪೂರ