ಸಿನಿಮಾ ಕ್ಷೇತ್ರಕ್ಕೆ ಗುಡ್ ​ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!

ತಿರುವನಂತಪುರಂ: ಮಲಯಾಳಂನ ಪ್ರಖ್ಯಾತ ಹಾಸ್ಯನಟ ಉನ್ನಿರಾಜನ್​ ಅವರು ಸಿನಿಮಾ ಕ್ಷೇತ್ರಕ್ಕೆ ಗುಡ್​ ಬೈ ಹೇಳಿ ಕಾಸರಗೋಡಿನ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್​ನಲ್ಲಿ ಸೋಮವಾರ (ಮೇ.9) ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದಾರೆ. ಮಲಯಾಳಂನ ಪ್ರಸಿದ್ಧ ಧಾರಾವಾಹಿ ಮರಿಮಯಮ್​ ಮೂಲಕ ಕೇರಳದಲ್ಲಿ ಖ್ಯಾತಿ ಗಳಿಸಿರುವ ಉನ್ನಿರಾಜನ್​, ಕಿರುತೆರೆ ಹೊರತಾಗಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಫಾಹದ್ ಫಾಸಿಲ್ ಅಭಿನಯದ ‘ತೊಂಡಿಮುತಾಳಂ ದೃಕ್ಷಾಕ್ಷಿಯುಂ’ ಮತ್ತು ಇನ್ವೆಸ್ಟಿಗೇಷನ್ ಥ್ರಿಲ್ಲರ್ ‘ಆಪರೇಷನ್ ಜಾವಾ’ ಸಿನಿಮಾದಲ್ಲಿನ ಅವರ ಅಭಿನಯವು ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ಅಚ್ಚುಮೆಚ್ಚಿನದಾಗಿದೆ. ತಮ್ಮ … Continue reading ಸಿನಿಮಾ ಕ್ಷೇತ್ರಕ್ಕೆ ಗುಡ್ ​ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!