ಮಧ್ಯರಾತ್ರಿ ಟ್ರಕ್​ ನಿಲ್ಲಿಸಿ ಕೆಳಗಿಳಿದ ಚಾಲಕ: ನಂತರ ನಡೆದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

ಕೊಯಮತ್ತೂರು: ತಾನು ನಿತ್ಯವು ಚಲಾಯಿಸುತ್ತಿದ್ದ ಟ್ರಕ್​ನಿಂದಲೇ​ ಚಾಲಕನ ಪ್ರಾಣ ಪಕ್ಷಿ ಹಾರಿ ಹೋಗಿರುವ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರು ಹೊರವಲಯದ ಕಡುವ್ವೆಟ್ಟಿಪಾಳ್ಯನಲ್ಲಿರುವ ಪೆಟ್ರೋಲ್​ ಬಂಕ್​ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಆರಂಭದಲ್ಲಿ ಕೊಲೆ ಎಂದು ಪೊಲೀಸರು ನಂಬಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅದೊಂದು ಅಪಘಾತ ಎಂದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಟ್ರಕ್​ನ ಹಿಂಭಾಗದ ಟೈಯರ್​ನಲ್ಲಿ ಸಿಲುಕಿದ್ದ 50 ವರ್ಷದ ಚಾಲಕ ಸುರೇಶ್​ ಬಾಬು ಅವರ ಮೃತದೇಹವನ್ನು ನೋಡಿ ಕೆಲ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ತಕ್ಷಣ … Continue reading ಮಧ್ಯರಾತ್ರಿ ಟ್ರಕ್​ ನಿಲ್ಲಿಸಿ ಕೆಳಗಿಳಿದ ಚಾಲಕ: ನಂತರ ನಡೆದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ