ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಮಗನ ಕ್ರೀಡೆಗೆ ಡಿಕೆಶಿ ನೆರವಿ‌ನ ಭರವಸೆ

ಚಾಮರಾಜನಗರ: ಕೋವಿಡ್​ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ‌ ಮಗನ ಕ್ರೀಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಚಾಮರಾಜನಗರದ ಶಂಕರಪುರದ ನಿವಾಸಿ ರಮೇಶ್‌ಬಾಬು ಅವರು ರಾಷ್ಟ್ರಮಟ್ಟದ ರೈಫಲ್‌ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕ್ಲಬ್​ನಲ್ಲಿ ಸ್ನೇಹಿತರ ರೈಫಲ್​ನಲ್ಲಿ ಅಭ್ಯಾಸ ಮುಂದುವರೆಸಿದ್ದಾರೆ‌. ಹೊಸ ರೈಫಲ್ ಖರೀದಿಗೆ 4.5 ಲಕ್ಷ ರೂ. ಬೇಕಾಗಿದೆ. ಇದೀಗ ಡಿಕೆಶಿ ಯುವಕನ ನೆರವಿಗೆ ಬಂದಿದ್ದಾರೆ. ಈ ಬಗ್ಗೆ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಡಿ.ಕೆ. ಶಿವಕುಮಾರ್​ ಅವರ ಬರೆದುಕೊಂಡಿದ್ದಾರೆ. … Continue reading ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಮಗನ ಕ್ರೀಡೆಗೆ ಡಿಕೆಶಿ ನೆರವಿ‌ನ ಭರವಸೆ