ದೂರು ನೀಡಲು ಹೋದ ದೂರುದಾರನ ಮೇಲೆಯೇ ವಿಶ್ವನಾಥಪುರ ಠಾಣಾ ಪೊಲೀಸರಿಂದ ದೌರ್ಜನ್ಯ!?

ಬೆಂಗಳೂರು: ದೂರು ನೀಡಲು ಹೋದ ದೂರುದಾರನ ಮೇಲೆಯೇ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣಾ ಪೊಲೀಸರ ವಿರುದ್ಧ ಕೇಳಿಬಂದಿದೆ. ದುದ್ದನಹಳ್ಳಿ ಗ್ರಾಮದ ಯುವಕನೊರ್ವನ ಬಗ್ಗೆ ಗ್ರಾಮದ ಸಮುದಾಯದ ಭವನದ ಗೋಡೆಗಳ ಮೇಲೆ ಅನಾಮಿಕರಿಂದ ಅಸಭ್ಯ ಬರಹಗಳನ್ನು ಬರೆಯಲಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಸಂತ್ರಸ್ತ ನಿಖಿಲ್, ತಮ್ಮ ಆಪ್ತರ ಜೊತೆಯಲ್ಲಿ​ ಹೋಗಿದ್ದ. ಈ ವೇಳೆ ವಿಶ್ವನಾಥಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಪುಟ್ಟರಾಜು ಎಂಬುವರು ದೂರುದಾರನ ಮೇಲೆಯೇ ಅವಾಜ್ ಹಾಕಿದ್ದಾರೆಂದು ಹೇಳಲಾಗಿದೆ. … Continue reading ದೂರು ನೀಡಲು ಹೋದ ದೂರುದಾರನ ಮೇಲೆಯೇ ವಿಶ್ವನಾಥಪುರ ಠಾಣಾ ಪೊಲೀಸರಿಂದ ದೌರ್ಜನ್ಯ!?