ಭಾರತದ ಚೌಕಿ ಮೇಲಿನ ದಾಳಿಗೆ 30 ಸಾವಿರ ರೂ. ಇನಾಮು: ಚಿಕಿತ್ಸೆ ಪಡೆಯುತ್ತಿದ್ದ ಬಂಧಿತ ಉಗ್ರ ಸಾವು

ಶ್ರೀನಗರ: ಭಾರತದ ಸೇನಾ ಚೌಕಿಯ ಮೇಲೆ ದಾಳಿ ಮಾಡಿದರೆ ಪಾಕ್ ಸೇನೆಯ ಕರ್ನಲ್​ವೊಬ್ಬರು 30 ಸಾವಿರ ರೂಪಾಯಿ (ಪಾಕ್ ಕರೆನ್ಸಿ) ನೀಡುವುದಾಗಿ ಹೇಳಿದ್ದರು ಎಂದು ಬಾಯ್ಬಿಟ್ಟಿದ್ದ ಬಂಧಿತ ಉಗ್ರ, ಚಿಕಿತ್ಸೆ ಫಲಿಸದೇ ಶನಿವಾರ (ಸೆ.3) ಮೃತಪಟ್ಟಿದ್ದಾನೆ. ಎರಡು ವಾರಗಳ ಹಿಂದೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಬಳಿ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ದಾಟಿ ಒಳನುಸುಳುತ್ತಿದ್ದ ಉಗ್ರನ ಕಾಲಿಗೆ ಗುಂಡಿಕ್ಕಿ ಬಂಧಿಸಲಾಗಿತ್ತು. ಗಾಯಗೊಂಡಿದ್ದ ಉಗ್ರನಿಗೆ ರಜೌರಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶನಿವಾರ ರಾತ್ರಿ ಹೃದಯ … Continue reading ಭಾರತದ ಚೌಕಿ ಮೇಲಿನ ದಾಳಿಗೆ 30 ಸಾವಿರ ರೂ. ಇನಾಮು: ಚಿಕಿತ್ಸೆ ಪಡೆಯುತ್ತಿದ್ದ ಬಂಧಿತ ಉಗ್ರ ಸಾವು