ಚಂದ್ರ ಗ್ರಹಣದಲ್ಲಿ ಉಂಡು-ತಿಂದು ಜನಜಾಗೃತಿ..! ಮೌಢ್ಯ ತೊಲಗಿಸಿ ಎಂದ ಸಮಿತಿ
ಗದಗ: ಚಂದ್ರ ಗ್ರಹಣವನ್ನು ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ವಿಭಿನ್ನವಾಗಿ ಆಚರಿಸಿದ್ದಾರೆ. ಗದಗ್ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಉಪಾಹಾರ ಸೇವಿಸಿದ್ದಾರೆ. ಈ ಮೂಲಕ ಮೌಢ್ಯ ನಿವಾರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಉಪ್ಪಿಟ್ಟು, ಮಿರ್ಚಿ, ಬದನೆಕಾಯಿ ಬಜ್ಜಿ, ಬಾಳೆಹಣ್ಣು ಸೇವನೆ ಮಾಡುತ್ತಾ, ‘ಗ್ರಹಣಗಳು ನಿಸರ್ಗದಲ್ಲಿ ನಡೆಯುವ ಸಾಮಾನ್ಯ ಕ್ರಿಯೆ, ಈ ವಿಚಾರದಲ್ಲಿ ಮೌಢ್ಯ ತುಂಬಿ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ಹೇಳಿದರು. ಮೌಢ್ಯ ನಂಬಬಾರದು ಎಂದು ಕರೆ ಕೊಟ್ಟರು.
Copy and paste this URL into your WordPress site to embed
Copy and paste this code into your site to embed