ಠಾಣೆಯಲ್ಲೇ ಕೆಲಸ ಮಾಡ್ತಿದ್ದ ಕೊಲೆ ಆರೋಪಿ, ರೌಡಿ ಶೀಟರ್!; ಇನ್​ಸ್ಪೆಕ್ಟರ್ ಕರ್ತವ್ಯಲೋಪ; ಅಮಾನತಾದ ಬೆನ್ನಿಗೇ ಪೊಲೀಸ್ ಅಧಿಕಾರಿ ಅಸ್ವಸ್ಥ

ಹುಬ್ಬಳ್ಳಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿ ಅಮಾನತಿಗೆ ಒಳಗಾದ ಪೊಲೀಸ್ ಇನ್​ಸ್ಪೆಕ್ಟರ್, ಆ ಕುರಿತ ಆದೇಶ ಹೊರಬೀಳುತ್ತಿದ್ದಂತೆ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರುವಂತಾದ ಪ್ರಕರಣವೊಂದು ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಸಬಾಪೇಟೆ ಪೊಲೀಸ್ ಇನ್​ಸ್ಪೆಕ್ಟರ್​ ಅಡಿವೆಪ್ಪ ಬನ್ನಿ ಅವರನ್ನು ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್​ ಲಾಬೂರಾಮ್ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಹೊರಬೀಳುತ್ತಿದ್ದಂತೆ ಇನ್​ಸ್ಪೆಕ್ಟರ್ ಅಸ್ವಸ್ಥಗೊಂಡಿದ್ದಾರೆ. ಕಳೆದ 12ರಂದು ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯ ಜಂಗ್ಲಿಪೇಟೆ ನಿವಾಸಿ ಸಂತೋಷ್ ಮುರಗೋಡ್ ಎಂಬಾತನ ಕೊಲೆಯಾಗಿತ್ತು. … Continue reading ಠಾಣೆಯಲ್ಲೇ ಕೆಲಸ ಮಾಡ್ತಿದ್ದ ಕೊಲೆ ಆರೋಪಿ, ರೌಡಿ ಶೀಟರ್!; ಇನ್​ಸ್ಪೆಕ್ಟರ್ ಕರ್ತವ್ಯಲೋಪ; ಅಮಾನತಾದ ಬೆನ್ನಿಗೇ ಪೊಲೀಸ್ ಅಧಿಕಾರಿ ಅಸ್ವಸ್ಥ