ಅಮ್ಮ ಬದುಕಬೇಕಿದ್ರೆ ವೆಂಟಿಲೇಟರ್ ಅಗತ್ಯ, ದಯವಿಟ್ಟು ಕೊಡಿಸಿ: ಸಚಿವರಿಗೆ ಕೈಮುಗಿದು ಬೇಡಿಕೊಂಡ ಯುವಕ

ಚಾಮರಾಜನಗರ: ರಾಜ್ಯದಲ್ಲಿ ಕರೊನಾ ಸೋಂಕಿತರಿಗೆ ಅಗತ್ಯಕ್ಕೆ ತಕ್ಕಂತೆ ಬೆಡ್​, ಐಸಿಯು, ಆಕ್ಸಿಜನ್ ಸಿಗದ ಪ್ರಕರಣಗಳು ಮುಂದುವರಿದಿದ್ದು, ಈಗಲೂ ಹಲವಾರು ರೋಗಿಗಳು ಮತ್ತು ಅವರ ಸಂಬಂಧಿಕರು ಅವುಗಳಿಲ್ಲದೆ ಪರದಾಡುತ್ತಿದ್ದಾರೆ. ಅಂಥವರ ಪೈಕಿ ಯುವಕನೊಬ್ಬ ತನ್ನ ತಾಯಿಗಾಗಿ ವೆಂಟಿಲೇಟರ್​ ಕೊಡಿಸಿ ಎಂದು ಸಚಿವರಲ್ಲಿ ಕೈಮುಗಿದು ಬೇಡಿಕೊಂಡಿದ್ದಾನೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕೃಷ್ಣ ಎಂಬ ಯುವಕ ಜಿಲ್ಲಾ ಉಸ್ತುವಾರಿ ಸಚಿವ ಎಸ್​. ಸುರೇಶ್​ ಕುಮಾರ್ ಅವರ ಬಳಿ ಹೀಗೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಅಮ್ಮನನ್ನು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಿಕೊಂಡಿದ್ದಾರೆ. ಅವರು … Continue reading ಅಮ್ಮ ಬದುಕಬೇಕಿದ್ರೆ ವೆಂಟಿಲೇಟರ್ ಅಗತ್ಯ, ದಯವಿಟ್ಟು ಕೊಡಿಸಿ: ಸಚಿವರಿಗೆ ಕೈಮುಗಿದು ಬೇಡಿಕೊಂಡ ಯುವಕ