ಪಂಚಮಸಾಲಿ ಮೀಸಲಾತಿಗಾಗಿ ಈಗ ಮೈಕ್ ಹಿಡಿದವರು ಹಿಂದೆ ಎಲ್ಲಿದ್ದರು: ನಿರಾಣಿ ಪ್ರಶ್ನೆ

ಬೆಳಗಾವಿ: ‘‘ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಸ್ಥಾನಮಾನ ಸಿಗಲೇಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದಲೂ ನಾನು ಬೆಂಬಲ ನೀಡುತ್ತಿದ್ದೇನೆ. ಇದೀಗ ಬಂದವರು ದಿನವೂ ಮೈಕ್ ಹಿಡಿಯುತ್ತಿದ್ದಾರೆ. ಅಂದು ಇವರೆಲ್ಲ ಎಲ್ಲಿದ್ದರು?’’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದ್ದಾರೆ. ‘‘ಹರಿಹರ ಮತ್ತು ಕೂಡಲ ಸಂಗಮ ಪೀಠಗಳ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಮೀಸಲಾತಿ ವಿಚಾರವಾಗಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳು ಹೋರಾಟ ನಿಲ್ಲಿಸಿ, ಸರ್ಕಾರದೊಂದಿಗೆ ಮಾತುಕತೆಗೆ … Continue reading ಪಂಚಮಸಾಲಿ ಮೀಸಲಾತಿಗಾಗಿ ಈಗ ಮೈಕ್ ಹಿಡಿದವರು ಹಿಂದೆ ಎಲ್ಲಿದ್ದರು: ನಿರಾಣಿ ಪ್ರಶ್ನೆ