ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ: ಮುದ್ದಾದ ಮಕ್ಕಳನ್ನು ತಬ್ಬಲಿ ಮಾಡಿದ ಕ್ರೂರಿ ಕರೊನಾ

ಮೈಸೂರು: ಮಹಾಮಾರಿ ಕರೊನಾ ವೈರಸ್​ ಮೃತ್ಯುಕೂಪಕ್ಕೆ ತಂದೆ-ತಾಯಿ ಬಲಿಯಾಗಿದ್ದು, ಮುದ್ದಾದ ಮಕ್ಕಳಿಬ್ಬರು ಅನಾಥವಾಗಿರುವ ಕರುಣಾಜನಕ ಘಟನೆ ಮೈಸೂರಿನಲ್ಲಿ ನಡೆದಿದೆ. ಕೇವಲ ಹತ್ತು ದಿನದ ಅಂತರದಲ್ಲಿ ಗಂಡ-ಹೆಂಡತಿ ಕರೊನಾಗೆ ಬಲಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಗುತ್ತಿಗೆ ನೌಕರ ಪ್ರಸನ್ನ ಹಾಗೂ ಹೆಂಡತಿ ಸುಷ್ಮಾರ ಸಾವು ಮಕ್ಕಳಿಬ್ಬರನ್ನು ತಬ್ಬಲಿಗಳನ್ನಾಗಿ ಮಾಡಿದೆ. ಪ್ರಸನ್ನರಿಗೆ ಕರೊನಾ ಸೋಂಕು ತಗುಲಿ ಮೈಸೂರಿನ ಗಂಗ್ರೋತ್ರಿ ಲೇಔಟ್‌ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಗಂಡನನ್ನು ನೋಡಿಕೊಳ್ಳುವಾಗ ಸುಷ್ಮಾರಿಗೂ ಸೋಂಕು ತಗುಲಿ ಮೇ 18ರಂದು ಮೊದಲು ಮೃತಪಟ್ಟಿದ್ದರು. ಇದಾದ ಹತ್ತು ದಿನಗಳ … Continue reading ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ: ಮುದ್ದಾದ ಮಕ್ಕಳನ್ನು ತಬ್ಬಲಿ ಮಾಡಿದ ಕ್ರೂರಿ ಕರೊನಾ