ಕಾಂಪೋಸ್ಟ್ ಅಭಿವೃದ್ಧಿ ಘಟಕಕ್ಕೆ ಬೀಗ; ಸ್ಥಳೀಯ ನಿವಾಸಿಗಳ ಹೋರಾಟಕ್ಕೆ ಜಯ | ಶಾಸಕ ಸತೀಶ್ ರೆಡ್ಡಿ ಸಂತಸ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯ ಬಳಿಯ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಘಟಕದ ಕದ ಕೊನೆಗೂ ಮುಚ್ಚಿದೆ. ಸ್ಥಳೀಯ ಶಾಸಕ ಸತೀಶ್ ರೆಡ್ಡಿ ನಿರಂತರ ಪ್ರಯತ್ನದಿಂದ ಘಟಕವನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ. ಬೆಂಗಳೂರು ನಗರದ 198 ವಾರ್ಡ್​ಗಳಲ್ಲಿ ಉತ್ಪತ್ತಿಯಾಗುತ್ತಿದ್ದ ಕಸ ಮತ್ತು ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಮರುಬಳಕೆ ಮಾಡುವ ಸಲುವಾಗಿ ಘಟಕವನ್ನು ನಿರ್ವಿುಸಲಾಗಿತ್ತು. ಆದರೆ ದಿನಕಳೆದಂತೆ ಕೆಸಿಡಿಸಿಯಲ್ಲಿನ ಬೆಟ್ಟದಂತಹ ಕಸದ ರಾಶಿಯಿಂದ ಹೊರಬರುತ್ತಿದ್ದ ದುರ್ವಾಸನೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಹೈರಾಣಾಗಿದ್ದರು. ಕೆಟ್ಟ ವಾಸನೆಯಿಂದಾಗಿ ಎಚ್​ಎಸ್​ಆರ್ ಬಡಾವಣೆ, ಸೋಮಸುಂದರಪಾಳ್ಯ, … Continue reading ಕಾಂಪೋಸ್ಟ್ ಅಭಿವೃದ್ಧಿ ಘಟಕಕ್ಕೆ ಬೀಗ; ಸ್ಥಳೀಯ ನಿವಾಸಿಗಳ ಹೋರಾಟಕ್ಕೆ ಜಯ | ಶಾಸಕ ಸತೀಶ್ ರೆಡ್ಡಿ ಸಂತಸ