ಕಲ್ಲು ಕ್ವಾರಿ ಕುಸಿದು 8 ಕಾರ್ಮಿಕರು ದುರಂತ ಸಾವು: ಸುಳಿವೇ ಸಿಗದ ನಾಲ್ವರಿಗಾಗಿ ತೀವ್ರ ಶೋಧ

ಐಜ್ವಾಲ: ಕಲ್ಲು ಕ್ವಾರಿ ಕುಸಿದು 8 ಮಂದಿ ಮೃತಪಟ್ಟಿರುವ ಘಟನೆ ಮಿಜೋರಾಂನಲ್ಲಿ ನಡೆದಿದೆ. ಸೋಮವಾರ ಕಲ್ಲು ಕ್ವಾರಿ ಕುಸಿದು ಅನೇಕರು ಅದರಡಿಯಲ್ಲಿ ಸಿಲುಕಿದ್ದರು. ಇಂದು (ನ.15) ಮುಂಜಾನೆ 8 ಮಂದಿಯ ಮೃತದೇಹವನ್ನು ಹೊರಗಡೆ ತೆಗೆಯಲಾಗಿದ್ದು, ನಾಲ್ವರು ಸುಳಿವು ಇನ್ನು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಮೃತರೆಲ್ಲರು ಬಿಹಾರದ ಕಾರ್ಮಿಕರು. ಸುಳಿವೇ ಇಲ್ಲದ ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಶವಪರೀಕ್ಷೆಯ ಬಳಿಕ ಮೃತದೇಹಗಳ ಗುರುತನ್ನು ಪತ್ತೆಹಚ್ಚಲಾಗುವುದು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ … Continue reading ಕಲ್ಲು ಕ್ವಾರಿ ಕುಸಿದು 8 ಕಾರ್ಮಿಕರು ದುರಂತ ಸಾವು: ಸುಳಿವೇ ಸಿಗದ ನಾಲ್ವರಿಗಾಗಿ ತೀವ್ರ ಶೋಧ