ಎದೆಮಟ್ಟ ನೀರಿದ್ದರೂ ವಿದ್ಯುತ್​ ಕಂಬ ಏರಿ ರಿಪೇರಿ ಕಾರ್ಯ ನಡೆಸಿದ ಮೆಸ್ಕಾಂ ಸಿಬ್ಬಂದಿ!

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಯಾವಮಟ್ಟಿಗೆ ಮಳೆಯಾಗುತ್ತಿದೆ ಎಂದರೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಕೆಲವೆಡೆ ಮಳೆ ಕಾರಣ ವಿದ್ಯುತ್​ ಸಮಸ್ಯೆ ತಲೆದೋರಿದ್ದು ಲೈನ್​ ಮ್ಯಾನ್​ಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಲೈನ್ ಮ್ಯಾನ್ ಒಬ್ಬರು ಧೈರ್ಯದಿಂದ ಮಾಡಿದ್ದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಈ ಲೈನ್​ ಮ್ಯಾನ್​, ನೆರೆ ನೀರಿನಲ್ಲಿ ಎದೆ ಮಟ್ಟದ ತನಕ ಮುಳುಗಿದ್ದರೂ ವಿದ್ಯುತ್ ತಂತಿ ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆ ಮಂಗಳೂರಿನ ಹೊರ ವಲಯದ ದೇರಳಕಟ್ಟೆಯಲ್ಲಿ ನಡೆದಿದೆ. … Continue reading ಎದೆಮಟ್ಟ ನೀರಿದ್ದರೂ ವಿದ್ಯುತ್​ ಕಂಬ ಏರಿ ರಿಪೇರಿ ಕಾರ್ಯ ನಡೆಸಿದ ಮೆಸ್ಕಾಂ ಸಿಬ್ಬಂದಿ!