ಅಂಚೆ ಸಿಬ್ಬಂದಿಗೆ ಕನ್ನಡ ಬರಲ್ಲ!

-ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅಂಚೆ ಕಚೇರಿಗಳಲ್ಲಿ ಕನ್ನಡ ಬಾರದ ಮಲಯಾಳಿ ಸಿಬ್ಬಂದಿಯನ್ನು ನೇಮಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಸಂಕಷ್ಟ ಎದುರಾಗುತ್ತಿದೆ. ಕೆಲತಿಂಗಳಿನಿಂದ ಕಾಸರಗೋಡು, ಮಂಜೇಶ್ವರ ತಾಲೂಕಿನ ವಿವಿಧ ಅಂಚೆ ಕಚೇರಿಗಳಲ್ಲಿ ಸ್ಥಳೀಯರ ಬದಲು ದಕ್ಷಿಣ ಕೇರಳದ ಸಿಬ್ಬಂದಿಯನ್ನು ನೇಮಿಸಿರುವುದರಿಂದ ಈ ಸಿಬ್ಬಂದಿಗೆ ಭಾಷಾ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಅಂಚೆ ಕಚೇರಿಗೆ ಭೇಟಿ ನೀಡುವ ಮಲಯಾಳ ಅರಿಯದ ಜನಸಾಮಾನ್ಯರು ಕೆಲವೊಮ್ಮೆ ಕೆಲಸ ಅರ್ಧಕ್ಕೆ ಬಿಟ್ಟು ವಾಪಸಾಗಬೇಕಾದ ಸ್ಥಿತಿಯೂ ಎದುರಾಗುತ್ತಿದೆ. ದಕ್ಷಿಣ ಕೇರಳದವರೇ ಹೆಚ್ಚು … Continue reading ಅಂಚೆ ಸಿಬ್ಬಂದಿಗೆ ಕನ್ನಡ ಬರಲ್ಲ!