ಧಾರವಾಡದಲ್ಲಿ ಅಪಘಾತಕ್ಕೆ 13 ಬಲಿ: ಪ್ರತಿ ಜನವರಿ ಇದೇ ಜಾಗದಲ್ಲಿ ನಡೆಯುತ್ತೆ ಭೀಕರ ಆಕ್ಸಿಡೆಂಟ್​!

ಧಾರವಾಡ: ಕಿಲ್ಲರ್ ಬೈಪಾಸ್ ಎಂದೇ ಪ್ರಸಿದ್ಧಿಯಾಗಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್​ನ ಇಟ್ಟಿಗಟ್ಟಿ ಕ್ರಾಸ್​ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆ ಮೂಲದ 12 ಮಹಿಳೆಯರು ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲೇ ಇಟ್ಟಿಗಟ್ಟಿ-ಯರಿಕೊಪ್ಪ ಮಧ್ಯೆ ಪದೇಪದೆ ಅಪಘಾತ ಸಂಭವಿಸುತ್ತಿದೆ. 2020ರ ಜನವರಿ 26ರಂದು ಇದೇ ರಸ್ತೆಯಲ್ಲಿ ಕುಂದಗೋಳ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಸ್ವಾಮೀಜಿ ಸೇರಿದಂತೆ ಅವರೊಂದಿಗೆ ಪ್ರಯಾಣಿಸುತ್ತಿದ್ದವರೂ ಮೃತಪಟ್ಟಿದ್ದರು. … Continue reading ಧಾರವಾಡದಲ್ಲಿ ಅಪಘಾತಕ್ಕೆ 13 ಬಲಿ: ಪ್ರತಿ ಜನವರಿ ಇದೇ ಜಾಗದಲ್ಲಿ ನಡೆಯುತ್ತೆ ಭೀಕರ ಆಕ್ಸಿಡೆಂಟ್​!