ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ

‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಕವಿವಾಣಿ ಆಶಯದಂತೆ ಬ್ರ್ಯಾಂಡ್ ಬೆಂಗಳೂರು ಮುಂದುವರಿದು ಬ್ರ್ಯಾಂಡ್​ ಕರ್ನಾಟಕ ಆಗಲಿ, ಕನ್ನಡಿಗರೇ ಪ್ರಚಾರ ರಾಯಭಾರಿಯಾಗಲಿ ಎಂದು ಅರ್ಥಶಾಸ್ತ್ರಜ್ಞ ಪ್ರೊ.ರಾಜೀವ್ ಗೌಡ, ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಸಾಹಿತಿ ವಸುಧೇಂದ್ರ ಆಶಯ ವ್ಯಕ್ತಪಡಿಸಿದರು. ‘ಕರ್ನಾಟಕ-50’ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ಮೂರು ವಿಭಿನ್ನ ಕ್ಷೇತ್ರದ ಈ ಪರಿಣತರು ‘ವಿಜಯವಾಣಿ’ ಸಂವಾದದಲ್ಲಿ ಪಾಲ್ಗೊಂಡು, ‘ಬ್ರಾ್ಯಂಡ್ ಕರ್ನಾಟಕ’ ರಾತ್ರಿ ಬೆಳಗಾಗುವುದರಲ್ಲಿ ಆಗುವುದಲ್ಲ. ಸಾಮೂಹಿಕ ಪ್ರಯತ್ನ, ನಿರಂತರ ಶ್ರಮದಿಂದ ನಿರೀಕ್ಷಿತ ಸಾಧನೆ ಸಾಧ್ಯ ಎಂಬ ಭರವಸೆ ವ್ಯಕ್ತಪಡಿಸಿದರು. … Continue reading ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ