ಮಂದಿರಗಳ ಮರುನಿರ್ಮಾಣ ಕಾರ್ಯ ನನ್ನ ಪಾಲಿಗೆ ಪ್ರಾಯಶ್ಚಿತ್ತ: ಕೆ.ಕೆ. ಮಹಮದ್, ASI ನಿರ್ದೇಶಕ

ನವದೆಹಲಿ: ಇತ್ತೀಚೆಗೆ ಯೂಟ್ಯೂಬ್ ಚ್ಯಾನಲ್​ನಲ್ಲಿ ನಡೆದ ಸಂದರ್ಶನವೊಂದರಲ್ಲಿ “ಇಸ್ಲಾಮಿಕ್ ದಾಳಿಕೋರರು ಮಾಡಿದ್ದ ದೇವಸ್ಥಾನದ ನಾಶಕ್ಕೆ ಪಶ್ಚಾತ್ತಾಪ ರೂಪದಲ್ಲಿ ಮಂದಿರಗಳ ಜೀರ್ಣೋದ್ಧಾರ ಮಾಡುತ್ತಿದ್ದೇನೆ” ಎಂದು ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಥವಾ ಪುರಾತತ್ವ ಇಲಾಖೆಯ ಮುಖ್ಯ ನಿರ್ದೇಶಕ ಕೆ.ಕೆ. ಮಹಮದ್ ಹೇಳಿದ್ದಾರೆ.ಇವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಕಾಮೆಂಟ್ ವಿಭಾಗದಲ್ಲಿ ವ್ಯಕ್ತವಾಗಿದೆ. ಇವರು, ಈ ಹಿಂದೆ ರಾಮಜನ್ಮ ಭೂಮಿ ಪ್ರಕರಣದಲ್ಲೂ ನ್ಯಾಯಾಲಯಕ್ಕೆ ಅಯೋಧ್ಯೆಯಲ್ಲಿ ಹಿಂದೆ ದೇವಸ್ಥಾನ ಇದ್ದ ಬಗ್ಗೆ ಸಾಕ್ಷ್ಯವನ್ನು ಒದಗಿಸಿದ್ದರು. … Continue reading ಮಂದಿರಗಳ ಮರುನಿರ್ಮಾಣ ಕಾರ್ಯ ನನ್ನ ಪಾಲಿಗೆ ಪ್ರಾಯಶ್ಚಿತ್ತ: ಕೆ.ಕೆ. ಮಹಮದ್, ASI ನಿರ್ದೇಶಕ