ಮೈಸೂರಿನಲ್ಲಿ ನಾಲ್ಕು ಕೋತಿಗಳ ಶಂಕಾಸ್ಪದ ಸಾವು, ಮಂಗನ ಕಾಯಿಲೆ ವದಂತಿ ಹಿನ್ನೆಲೆ ಮಂಗಗಳ ದೇಹದ ಪರೀಕ್ಷೆ

ಮೈಸೂರು: ತಾಲೂಕಿನ ಉತ್ತನಹಳ್ಳಿ ಬಳಿಯ ಹಡಜನ ಗ್ರಾಮದಲ್ಲಿ ನಾಲ್ಕು ಕೋತಿಗಳು ಅನುಮಾನಾಸ್ಪದವಾಗಿ ಸೋಮವಾರ ಮೃತಪಟ್ಟಿವೆ. ವಕೀಲ ವೇಣುಗೋಪಾಲ್​ ಎಂಬುವರ ತೋಟದಲ್ಲಿ ಬೆಳಗ್ಗೆ ಎರಡು ಕೋತಿಗಳು ಅಸುನೀಗಿವೆ. ಸಹಜ ಸಾವು ಎಂದುಕೊಂಡು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಎರಡು ಮಂಗಗಳು ನಿತ್ರಾಣಗೊಂಡಿದ್ದು ಕಂಡುಬಂದಿತು. ಅನುಮಾನಗೊಂಡ ವೇಣುಗೋಪಾಲ್​, ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪಶುವೈದ್ಯರು ಕೋತಿಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು. ಆದರೆ, ಅದು ಫಲ ನೀಡಲಿಲ್ಲ. ಹಠಾತ್ತನೆ … Continue reading ಮೈಸೂರಿನಲ್ಲಿ ನಾಲ್ಕು ಕೋತಿಗಳ ಶಂಕಾಸ್ಪದ ಸಾವು, ಮಂಗನ ಕಾಯಿಲೆ ವದಂತಿ ಹಿನ್ನೆಲೆ ಮಂಗಗಳ ದೇಹದ ಪರೀಕ್ಷೆ