ಗೊಂದಲ ಬೇಡ: ಲಸಿಕೆ ವಿಷಯವನ್ನು ರಾಜಕೀಯದಿಂದ ದೂರ ಇಡಿ..

ಕರೊನಾ ಎರಡನೇ ಅಲೆಯ ವಿರುದ್ಧ ಪ್ರಬಲ ಹೋರಾಟ ನಡೆಯುತ್ತಿದೆ. ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳುವುದೇ ಕರೊನಾ ವಿರುದ್ಧ ಪ್ರಬಲ ಅಸ್ತ್ರ ಎಂದು ವೈದ್ಯಕೀಯ ರಂಗದ ತಜ್ಞರು ಹೇಳಿದ್ದಾರೆ. ಹೀಗಾಗಿ, ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಲಸಿಕೆಗೆ ಭಾರಿ ಬೇಡಿಕೆ ಏರ್ಪಟ್ಟಿದೆ. ಹಂತ-ಹಂತವಾಗಿ ಲಸಿಕೆ ಅಭಿಯಾನ ವೇಗವನ್ನೂ ಪಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಿ, … Continue reading ಗೊಂದಲ ಬೇಡ: ಲಸಿಕೆ ವಿಷಯವನ್ನು ರಾಜಕೀಯದಿಂದ ದೂರ ಇಡಿ..